ಕಳಿಯ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ವಸಂತ ಮಜಲು, ಉಪಾಧ್ಯಕ್ಷರಾಗಿ ರಾಜ್‌ಪ್ರಕಾಶ್ ಶೆಟ್ಟಿ ಆಯ್ಕೆ

0

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವಸಂತ ಮಜಲು ಮತ್ತು ಉಪಾಧ್ಯಕ್ಷರಾಗಿ ರಾಜ್‌ಪ್ರಕಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರ ಆಯ್ಕೆಗಾಗಿ ನಡೆದಿದ್ದ ಚುನಾವಣೆಯಲ್ಲಿ ವಸಂತ ಮಜಲು, ರಾಜ್‌ಪ್ರಕಾಶ್ ಶೆಟ್ಟಿ, ಹರಿದಾಸ್ ಪಡಂತ್ತಾಯ, ಶೇಖರ್ ನಾಯ್ಕ, ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕುಶಾಲಪ್ಪ ಗೌಡ, ಲೋಕೇಶ್ ನಾಳ, ಉದಿತ್ ಕುಮಾರ್, ಗೋಪಾಲ ಬನ, ಮಮತಾ ಆಳ್ವ, ಚಂದ್ರಾವತಿ ಮತ್ತು ಕೇಶವ ಪೂಜಾರಿ ಆಯ್ಕೆಯಾಗಿದ್ದರು.

ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ. ನೇತೃತ್ವದಲ್ಲಿ ಡಿ.27ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ನಡೆದು ಐದನೇ ಬಾರಿಗೆ ಅಧ್ಯಕ್ಷರಾಗಿ ವಸಂತ ಮಜಲು ಆಯ್ಕೆಯಾದರು.ಉಪಾಧ್ಯಕ್ಷರಾಗಿ ರಾಜ್‌ಪ್ರಕಾಶ್ ಶೆಟ್ಟಿ ಆಯ್ಕೆಯಾದರು.

LEAVE A REPLY

Please enter your comment!
Please enter your name here