ಕಲ್ಮಂಜ: ಗುಂಡ ಶ್ರೀ ಉಳ್ಳಾಯ ಉಳ್ಳಾಲ್ತಿ ದೈವಸ್ಥಾನದಲ್ಲಿ ಪವಾಡ- ಹೋಮದ ಅಗ್ನಿಯಲ್ಲಿ ಕುದುರೆ ಮೇಲೇರಿ ಕುಳಿತಂತೆ ಮೂಡಿದ ದೃಶ್ಯ

0

ಕಲ್ಮಂಜ: ಬದಿನೆಡೆ ಗುಂಡ ಶ್ರೀ ಉಳ್ಳಾಯ ಉಳ್ಳಾಲ್ತಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯದ ಪರಿಹಾರ ಪೂಜೆ ನಡೆಯುತ್ತಿದ್ದು, ಡಿ.21, 22ರಂದು ಬಾಲಾಲಯ ಪ್ರತಿಷ್ಠೆ ಮತ್ತು ಧಾರ್ಮಿಕ ವಿಧಿ ವಿಧಾನ ನೆರವೇರಿತು.

ಈ ಸಂದರ್ಭದಲ್ಲಿ ದೈವದ ಸೇವಾರ್ಥವಾಗಿ ಹೋಮ ಹವನಗಳು ನಡೆದಿದ್ದು, ಹೋಮದ ಅಗ್ನಿಯಲ್ಲಿ ಕುದುರೆ ಮೇಲೇರಿ ಕುಳಿತಂತೆ ಕಾರ್ಣಿಕ ದೈವ ಶ್ರೀ ಉಳ್ಳಾಯ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಗ್ರಾಮದ ಅತ್ಯಂತ ಕಾರಣಿಕ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಶ್ರೀ ಉಳ್ಳಾಯ ಉಳ್ಳಾಲ್ತಿ ದೈವಸ್ಥಾನದಲ್ಲಿ ಇದೀಗ ದೈವ ತನ್ನ ಇರುವಿಕೆಯನ್ನು ತೋರಿಸಿ ಕೊಟ್ಟಿದ್ದು ಭಕ್ತರನ್ನು ಮತ್ತಷ್ಟು ಪುಳಕಿತಗೊಳಿಸಿದೆ.

LEAVE A REPLY

Please enter your comment!
Please enter your name here