ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ ವಿಜೇತರಿಗೆ ಬಹುಮಾನ ವಿತರಣೆ-ಸುದ್ದಿ ಏಜೆಂಟರುಗಳ, ಪ್ರತಿನಿಧಿಗಳ ವಾರ್ಷಿಕ ಸಮ್ಮಿಲನ

0

ಬೆಳ್ತಂಗಡಿ: ಸುದ್ದಿ ಬಿಡುಗಡೆ ವಾರಪತ್ರಿಕೆಯ ಏಜೆಂಟರು ಹಾಗೂ ಪ್ರತಿನಿಧಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಡಿ.16ರಂದು ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.

ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಬಹುಮಾನ ಕೂಪನ್ ಡ್ರಾ ಮಾಡಲಾಯಿತಲ್ಲದೆ ರೂಪದರ್ಶಿ, ಸೂಪರ್ ಜೋಡಿ, ಮುದ್ದು ಮಕ್ಕಳ ಸ್ಪರ್ಧೆ, ಚಿಣ್ಣರ ಕಥೆ, ಚಿತ್ರ ಕವನ ಚಿತ್ರ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕರಾದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಬಹುಮಾನ ವಿತರಿಸಿ ಶುಭ ಹಾರೈಸಿದರು.‌

ಸಿಇಒ ಸಿಂಚನಾ ಊರುಬೈಲು, ವ್ಯವಸ್ಥಾಪಕ ಮಂಜುನಾಥ ರೈ, ಸ್ಥಾನೀಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಉಪವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು, ಹಿರಿಯ ವರದಿಗಾರ ಹೆರಾಲ್ಡ್ ಪಿಂಟೋ, ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೊಲೆ, ಹಿರಿಯ ಪ್ರತಿನಿಧಿ ಶ್ರೀನಿವಾಸ ತಂತ್ರಿ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಬಹುಮಾನ ಕೂಪನ್ ಡ್ರಾ ವಿಜೇತರು: ಸುದರ್ಶನ್ ಆಚಾರ್ಯ ಅರಸಿನಮಕ್ಕಿ, ಗನ್ಯ ಶೆಟ್ಟಿ ತೋಟತ್ತಾಡಿ, ಸುಗುಣ ರಮೇಶ್ ನಾರ್ಯ ಬಣದಡ್ಡು, ಸ್ಪೂರ್ತಿ ಕಡಿರುದ್ಯಾವರ, ಧನುಷ್ ಗೇರುಕಟ್ಟೆ, ಪ್ರಾಪ್ತ ಹೆಗ್ಡೆ ಪಡಂಗಡಿ,ಅಣ್ಣು ಪೂಜಾರಿ ಎಸ್ ನಿವೃತ್ತ ಅಧ್ಯಾಪಕರು ಪಿಲ್ಯ, ಸಂತೋಷ್ ಆಚಾರ್ಯ ಕಡಿರುದ್ಯಾವರ, ಶ್ರೀನಿವಾಸ ಗೌಡ.ಕೆ ನೆರಿಯ, ಯತಿರಾಜ ಬೆಳಾಲು, ಚಂದ್ರಶೇಖರ ಕಳೆಂಜ, ಸುಜಾತ ಗೋಪಿನಾಥ್ ದಾಸ್ ಕುವೆಟ್ಟು, ಸುಧೀರ್ ಕೆ.ಏನ್ ಉರುವಾಲು, ಹೊನ್ನಯ್ಯ ಟೈಲರ್ ಕುಕ್ಕೇಡಿ, ಭರತ್.ಬಿ ಇಂದಬೆಟ್ಟು, ಚಂಚಲ ಒಡಿಲ್ನಾಳ,ಮನಿಷ ವಾಸ್ ಪಣಕಜೆ, ಸಿಂಭ ಮರೋಡಿ, ಭವಿಶ್ಕ ಕಡಿರುದ್ಯಾವರ, ಹರೀಶ್ ದೇವಾಡಿಗ ಉಜಿರೆ, ಚಂದ್ರಶೇಖರ ಕಲ್ಲಗುಡ್ಡೆ, ಭಾರತಿ ನಡ್ತಿಕಲ್ಲು ಬಡಕೋಡಿ, ರಕ್ಷಿತ್ ಗೌಡ ಕನ್ಯಾಡಿ ೧, ಸತೀಶ್ ರಾವ್ ಪುದುವೆಟ್ಟು, ಪುಷ್ಪ ಎಸ್.ಹೆಬ್ಬಾರ್ ವಿಕ್ರಂ ಟ್ರೇಡರ್ಸ್ ಕೊಕ್ಕಡ

LEAVE A REPLY

Please enter your comment!
Please enter your name here