ಬೆಳಾಲು ಮಾಯ ಫ್ರೆಂಡ್ಸ್ ವತಿಯಿಂದ ನಡೆಯುವ ಕಬಡ್ಡಿ ಪಂದ್ಯಾಟದ ಆಮಂತ್ರಣ ಬಿಡುಗಡೆ

0

ಬೆಳಾಲು: ಮಾಯ ಫ್ರೆಂಡ್ಸ್ ಮಾಯ ಇದರ ವತಿಯಿಂದ ಡಿ.17 ರಂದು ನಡೆಯುವ ತಾಲೂಕು ಮಟ್ಟದ ಪುರುಷರ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಮಾಯ ಮಹಾದೇವಾ ದೇವಸ್ಥಾನದಲ್ಲಿ ಡಿ.4 ರಂದು ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ಬಿಡುಗಡೆಗೊಳಿಸಿದರು.

ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಆಮಂತ್ರಣ ಪತ್ರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಮಾಯಾ ಫ್ರೆಂಡ್ಸ್ ಪ್ರಧಾನ ಸಂಚಾಲಕರು ದಯಾನಂದ ಪಿ., ಉಪಾಧ್ಯಕ್ಷ ಶಶಿಧರ ಶಿಲ್ಪಿ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾರ್ಪಾಲು, ಕಾರ್ಯದರ್ಶಿ ರಾಘವೇಂದ್ರ ಪುಚ್ಚೆಹಿತ್ತಿಲು, ಕಾರ್ಯದರ್ಶಿ ಗಣೇಶ್ ಕನಿಕ್ಕಿಲ, ಜೊತೆ ಕಾರ್ಯದರ್ಶಿ ಶಶಿಧರ ನಾಗಕಲ್ಲು, ಕೋಶಾಧಿಕಾರಿ ಪ್ರವೀಣ್ ಪಿಲತ್ತಡಿ, ಸದಸ್ಯರುಗಳಾದ ಹರೀಶ್ ಕುದ್ರಾಲು, ರಂಜನ್ ಮಾಯ, ಧನುಷ್ ಮಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here