ಬೆಳ್ತಂಗಡಿ: ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಸಂಸ್ಥೆಯ ಶುಭಾರಂಭ

0

ಬೆಳ್ತಂಗಡಿ: ಗ್ರಾಹಕರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿ ಇದೀಗ ಬೆಳ್ತಂಗಡಿಯ ಮೂರು ಮಾರ್ಗದ ಬಳಿಯಿರುವ ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ ಮಂಜೂಷ ಗ್ಲಾಸ್ & ಪ್ರೈವುಡ್ಸ್ ಸಂಸ್ಥೆಯು ಡಿ.4 ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ನಿಶ್ಚಲ್ ಜೈನ್‌ ಉದ್ಘಾಟಿಸಿ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ನೆಲೆಯಲ್ಲಿ ಬರೋಡದ ಶಶಿ ಕ್ಯಾಟರಿಂಗ್ ಆಡಳಿತ ನಿರ್ದೇಶಕ, ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ ಮಂಜೂಷ ಗ್ಲಾಸ್ & ಪ್ರೈವುಡ್ ಸಂಸ್ಥೆಯೊಂದಿಗೆ ಗ್ರಾಹಕರಿಗೆ ನಗುಮೊಗದ ಹಾಗೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಸಿ, ಪ್ರಾಮಾಣಿಕ ಸೇವೆ ಸಲ್ಲಿಸುವುದರಿಂದ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂಬ ವಿಶ್ವಾಸವಿದೆ. ಸಂಸ್ಥೆಯನ್ನು ನಾವೆಲ್ಲರೂ ಸೇರಿ ಬೆಳೆಸೋಣ ಎಂದು ಶುಭಹಾರೈಸಿದರು.

ಉಜಿರೆ ಬೆನಕ ಕನ್ ಸ್ಟ್ರಕ್ಷನ್ ಇಂಜಿನಿಯರ್ ಗಣೇಶ್ ಉಜಿರೆ ನೂತನ ಸಂಸ್ಥೆಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಎ.ಜಯಕುಮಾ‌ರ್ ಶೆಟ್ಟಿ ಅರ್ಕುಳಬೀಡು, ಮಾಲಕರ ಮಾತ-ಪಿತರಾದ ರಜನಿ ಮತ್ತು ಮಂದರ ಶೆಟ್ಟಿ, ಉಜಿರೆ ಪವ‌ರ್ ಹೌಸ್ ಮಾಲಕ ಜಿತೇಶ್ ಜೈನ್, ಶಾಂತಿಸಾಗರ್ ಕನ್ ಸ್ಟ್ರಕ್ಷನ್ ನ ಸಮೃದ್ದಿ ಜೈನ್, ವಿಜಯ್ ಸ್ಟೋರ್ ಉಜಿರೆಯ ವಿಜಯ ಇಂದ್ರ, ಎಸ್.ಡಿ.ಎಂ ಆಸ್ಪತ್ರೆಯ ಅಜೇಯ್ ಜೈನ್, ಅಕ್ಷಯ್ ಆ‌ರ್ ಜೈನ್, ಬ್ಯಾಂಕ್ ಆಫ್ ಬರೋಡ ಪ್ರಸಾದ್ ಕುಮಾರ್, ಸಾಯಿ ನವಶಕ್ತಿ, ಆದರ್ಶ್ ಗುರುವಾಯನಕೆರೆ, ಅಗ್ರೀಲಿಫ್ ನಿರ್ದೇಶಕ ಅತಿಶ್ರಯ ಜೈನ್ ಉಪಸ್ಥಿತರಿದ್ದರು.

ಮಂಜೂಷ ಗ್ಲಾಸ್ & ಪ್ರೈವುಡ್‌ ಸಂಸ್ಥೆಯ ಪ್ರಿಯಾಂಕ್ ಜೈನ್, ಶ್ರಯಾಂಕ್ ಜೈನ್, ಶಶಾಂಕ್ ಜೈನ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

ಆಧುನಿಕ ಮನೆಗಳ ಹಾಗೂ ಸಂಸ್ಥೆಗಳ ಇತ್ತೀಚಿನ ವಿನ್ಯಾಸಗಳು ಮತ್ತು ಮಾದರಿಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಗ್ಲಾಸ್ & ಪೈವುಡ್ಸ್ ಬಳಕೆಯನ್ನು ಒಳಗೊಂಡಿದೆ.ಸಂಸ್ಥೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಗ್ಲಾಸ್, ಪ್ರೈವುಡ್ಸ್ ಹಾಗೂ ಮನೆ, ಸಂಸ್ಥೆಯ ಸೌಂದರ್ಯ ಹೆಚ್ಚಿಸುವ, ಉತ್ತಮ ಬೆಳಕು ಬೀಳುವಂತ ಐಟಂಗಳು ಲಭ್ಯವಿದೆ.ಪವರ್ ಟೂಲ್ಸ್ ಕಿಚನ್ ಸೆಟ್ಟಿಂಗ್, ಹಾರ್ಡ್‌ವೇ‌ರ್ ಸಿಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here