ಬೆಂಗಳೂರು ಕಂಬಳ ನಮ್ಮ ಕಂಬಳದಲ್ಲಿ ಭಾಗವಹಿಸುತ್ತಿರುವ ಬೆಳ್ತಂಗಡಿಯ ಕಂಬಳ ತಂಡಗಳು- ಸುದ್ದಿ ಲೈವ್ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ

0

ಬೆಳ್ತಂಗಡಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ “ಬೆಂಗಳೂರು ಕಂಬಳ ನಮ್ಮ ಕಂಬಳ”ದಲ್ಲಿ ಕರವಾಳಿಯ ಪ್ರಸಿದ್ಧ ಕಂಬಳ ತಂಡಗಳು ಭಾಗವಹಿಸುತ್ತಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿ ಯುವರಾಜ ಜೈನ್‌ರವರ ತಂಡ ಅಡ್ಡಹಲಗೆಯಲ್ಲಿ.ನೇಗಿಲು ಹಿರಿಯ ವಿಭಾಗದಲ್ಲಿ ಬಂಗಾಡಿ ಹಮೀದ್, ಬಂಗಾಡಿ ಪರಂಬೇಲು ಉದಯ ಕುಮಾರ್, ಬೆಳ್ತಂಗಡಿ ಸುದೆಮುಗೇರು ಭ್ರಾಮರಿ ನಿವಾಸ ಪ್ರವೀಣ್ ರತ್ನ, ಹಗ್ಗ ಕಿರಿಯ ವಿಭಾಗದಲ್ಲಿ ಬಂಗಾಡಿ ದೇವಪಾಲ್ ದಿನಕರ್ ರಾಜ್, ಗುರುವಾಯನಕೆರೆ ಕಂರ್ಬಿತ್ಲು ಮೋಹನ್ ಕುಮಾರ್, ಬಂಗಾಡಿ ಜಮಾಲ್ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಕನ್ನಡಿಕಟ್ಟೆ ಪಾಲ್ತಿಯಾರು ರಂಜಿತ್ ಶೆಟ್ಟಿ ಅವರ ತಂಡ ಭಾಗವಹಿಸುತ್ತಿದೆ.

ಬೆಂಗಳೂರು ಕಂಬಳ ನಮ್ಮ ಕಂಬಳದ ವಿಶೇಷ ಪುರವಣಿಯನ್ನು ಸುದ್ದಿ ಬಿಡುಗಡೆ ತಂದಿದೆ.ಕಂಬಳದ ನೇರಪ್ರಸಾರ ಸುದ್ದಿ ಲೈವ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

LEAVE A REPLY

Please enter your comment!
Please enter your name here