ವಿಜಯಪ್ರಸಾದ್ ಬಂಟ್ವಾಳ ನೂತನ ಡಿವೈಎಸ್‌ಪಿ

0

ಬೆಳ್ತಂಗಡಿ: ಬಂಟ್ವಾಳ ಉಪವಿಭಾಗದ ಪೊಲೀಸ್ ಇಲಾಖೆಯ ನೂತನ ಡಿವೈಎಸ್‌ಪಿಯಾಗಿ ವಿಜಯ್‌ಪ್ರಸಾದ್ ಎಸ್. ಆಗಮಿಸಲಿದ್ದಾರೆ. ಡಿವೈಎಸ್‌ಪಿಯಾಗಿದ್ದ ಪ್ರತಾಪಸಿಂಗ್ ತೋರಟ್ ಅವರನ್ನು ರಾಜ್ಯ ಸರಕಾರ ಲೋಕಾಯುಕ್ತ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿದ್ದು ಇವರ ಜಾಗಕ್ಕೆ ವಿಜಯಪ್ರಸಾದ್ ಎಸ್. ಅವರನ್ನು ನೇಮಿಸಲಾಗಿದೆ. ಪುತ್ತೂರು ಮೂಲದವರಾದ ವಿಜಯಪ್ರಸಾದ್ ಅವರು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಡಿಸಿಆರ್‌ಬಿ ಡಿವೈಎಸ್‌ಪಿಯಾಗಿದ್ದರು. ಲೋಕಾಯುಕ್ತ ಡಿವೈಎಸ್‌ಪಿಯಾಗಿಯೂ ಸೇರಿದಂತೆ ವಿವಿದೆಡೆ ವಿಜಯಪ್ರಸಾದ್ ಕಾರ್ಯ ನಿರ್ವಹಿಸಿದ್ದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸಿಆರ್‌ಬಿಯ ಡಿವೈಎಸ್‌ಪಿಯಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಪುತ್ತೂರು ಉಪವಿಭಾಗದ ಡಿವೈಎಸ್‌ಪಿಯಾಗಿ ಪ್ರಭಾರ ಕರ್ತವ್ಯದಲ್ಲಿದ್ದ ಡಾ. ಗಾನಾ ಪಿ. ಕುಮಾರ್ ಅವರನ್ನೂ ಲೋಕಾಯುಕ್ತ ಡಿವೈಎಸ್‌ಪಿಯಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ.

LEAVE A REPLY

Please enter your comment!
Please enter your name here