ಅಬಕಾರಿ ಇಲಾಖೆಯ ಮಂಗಳೂರು ಉಪವಿಭಾಗ-2ರ ಡಿವೈಎಸ್‌ಪಿ ಸೌಮ್ಯಲತಾ ಎನ್ ಕರ್ತವ್ಯಕ್ಕೆ ಹಾಜರು

0

ಬೆಳ್ತಂಗಡಿ: ಮಂಗಳೂರು ಉಪವಿಭಾಗ-2ರ ಅಬಕಾರಿ ಇಲಾಖೆಯ ಡಿವೈಎಸ್‌ಪಿಯಾಗಿ ಸೌಮ್ಯಲತಾ ಎನ್ ಕರ್ತವ್ಯಕ್ಕೆ ಇಂದು ಹಾಜರಾಗಿದ್ದಾರೆ. ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಮಂಗಳೂರು ಉಪವಿಭಾಗ-2ರ ಅಬಕಾರಿ ಇಲಾಖೆಯ ಭಡ್ತಿ ಪಡೆದರು. 2006ರಲ್ಲಿ ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಸೇವೆಗೆ ಹಾಜರಾದ ಇವರು ಬಳಿಕ ವಿವಿಧ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದರು. ಬೆಳ್ತಂಗಡಿಯಲ್ಲಿ 2005ರ ಮೇ 25ರಿಂದ ಜೂನ್ 3ರವರೆಗೆ, 2007005 2008, 201580d 2018, 201880d 2019, 201980 2021 ಕಾರ್ಯ ನಿರ್ವಹಿಸಿದ್ದ ಇವರು 2023ರ ಸೆಪ್ಟೆಂಬರ್ 11ರಿಂದ ಅಬಕಾರಿ ನಿರೀಕ್ಷಕರಾಗಿ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಡಿವೈಎಸ್‌ಪಿಯಾಗಿ ಪದೋನ್ನತಿ ಪಡೆದಿದ್ದಾರೆ. ಈ ಹಿಂದೆ ಅಬಕಾರಿ ನಿರೀಕ್ಷಕರಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ವಲಯ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಲಯ, ಉಡುಪಿ, ಬಂಟ್ವಾಳ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಮಂಗಳೂರು- ಉಡುಪಿ-ಶಿವಮೊಗ್ಗ-ಉತ್ತರಕರ್ನಾಟಕ-ಕೊಡಗು ಜಿಲ್ಲೆ ವ್ಯಾಪ್ತಿಗೆ ಸೇರಿದ ಮಂಗಳೂರು ಉಪವಿಭಾಗ ಮಟ್ಟದಲ್ಲಿ ಅತ್ಯುತ್ತಮ ಅಬಕಾರಿ ನಿರೀಕ್ಷರ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಬೆಳ್ತಂಗಡಿ ತಾಲೂಕು ಲಾಯಿಲದಲ್ಲಿ ನೋಟರಿ ವಕೀಲರಾಗಿರುವ ಪತಿ ಸಂತೋಷ್ ಕುಮಾರ್, ಮಕ್ಕಳಾದ ಸಮೀಕ್ಷಾ ಹಾಗೂ ಸಂಪ್ರೀತ್‌ರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here