ಬೆಳ್ತಂಗಡಿ: ಪಿ.ವಿ.ಸಿ ಪೈಪ್ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ.

0

ಬೆಳ್ತಂಗಡಿ: ಬೆಳ್ತಂಗಡಿ ಕೃಷಿ ಇಲಾಖೆಯ ತಾಲೂಕಿನ ಜಲಾನಯನ ವಿಭಾಗದಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಇತರೆ ಉಪಚಾರಗಳು (PMKSY-OI) ಯೋಜನೆಯಡಿ ಶೇ.50 ರ ರಿಯಾಯಿತಿಯಲ್ಲಿ ಗರಿಷ್ಠ ರೂ.10,000 ಮಿತಿಗೊಳಪಟ್ಟು ಪಿ.ವಿ.ಸಿ ಪೈಪ್ ಗಳನ್ನು ಇಲಾಖೆಯ ಮೂಲಕ ಪಡೆಯಲು ರೈತರು ತಮ್ಮ ಜಮೀನಿನ RTC, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೊ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ (SC-ST) ರೈತರ ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಹೋಬಳಿಗಳಾದ ಬೆಳ್ತಂಗಡಿ, ಕೊಕ್ಕಡ, ವೇಣೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ, ಅದೇ ರೀತಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ. 50 ರಷ್ಟು ಸಹಾಯಧನ ಗರಿಷ್ಟ ರೂ. 63,000/- ಮಿತಿಗೊಳಪಟ್ಟು ಸಹಾಯಧನ ಪಡೆಯಲು ಸಾಮಾನ್ಯ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು ಮೇಲ್ಕಾಣಿಸಿದ ದಾಖಲೆಯೊಂದಿಗೆ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ಅರ್ಜಿಯನ್ನು ಸಲ್ಲಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here