ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಧನ ಸಹಾಯ ಹಸ್ತಾಂತರ

0

ನಿಡ್ಲೆ : ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಕ್ಷೇಮ ನಿಧಿ ಯೋಜನೆಯ 10ನೇ ಸಹಾಯ ಧನವನ್ನು ನಿಡ್ಲೆ ಗ್ರಾಮದ ಬರೆಂಗಾಯ ವನ ದುರ್ಗಾ ರಿಕ್ಷಾ ಚಾಲಕರ ಸಂಘದ ಸದಸ್ಯ ರಾಜೇಶ್ ಬರೆಂಗಾಯ ಅವರಿಗೆ ನೀಡಲಾಯಿತು.

ಅವರ ರಿಕ್ಷಾ ಅಪಘಾತದಲ್ಲಿ ಇವರಿಗೆ ಗಾಯಗಳಾಗಿ ಬೆನಕ ಆಸ್ಪತ್ರೆ ಉಜಿರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ.

ಇವರಿಗೆ ಕ್ಷೇಮ ನಿಧಿ ರೂ 5,000/ವನ್ನು ಹಸ್ತಾಂತರಿಸಲಾಯಿತು.

ನೇತಾಜಿ ಆಟೋ ಚಾಲಕ ಮಾಲಕ ಸಂಘ ಕಾಯರ್ತಡ್ಕ ಸಂಘದ ಸದಸ್ಯರು ಹಾಗೂ ಕಳೆಂಜ ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕಾಯರ್ತಡ್ಕ, ಬರೆಂಗಾಯ ರಿಕ್ಷಾ ಚಾಲಕ ಸಂಘದ ಆಧ್ಯಕ್ಷ ಶಿವರಾಮ ಬರೆಂಗಾಯ, ಕಾರ್ಯದರ್ಶಿ ದೀಕ್ಷಿತ್ ಬರೆಂಗಾಯ ಇವರು ಹಸ್ತಾಂತರಿಸಿದರು.

ಸದಸ್ಯರಾದ ಜಗದೀಶ್ ಬರೆಂಗಾಯ. ಅಶ್ವತ್ಥ್ ಬರೆಂಗಾಯ, ಜೀವನ್ ಬರೆಂಗಾಯ, ಮನೋಜ್ ಬರೆಂಗಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here