ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ರಸ್ತೆ ದುರಸ್ತಿ ಕಾರ್ಯ

0

ಶಿಬರಾಜೆ: ಅರಸಿನಮಕ್ಕಿಯಿಂದ ಕಳೆಂಜ ಬರುವ ಮಾರ್ಗ ಮಧ್ಯೆ ಶೇಡಿ ಎಂಬಲ್ಲಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸವಾರರಿಗೆ ಆ ಜಾಗದಲ್ಲಿ ಓಡಿಸಲು ತುಂಬಾ ಕಷ್ಟ ಪಡುತ್ತಿದ್ದರು ಹಾಗೂ ಈ ರಸ್ತೆ ಸಮಸ್ಯೆಯಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು ಸವಾರರಿ ಗಂತು ತುಂಬಾ ಪ್ರಾಣಸಂಕಟವಾಗುತ್ತಿದ್ದ ಈ ರಸ್ತೆಯು ಇಳಿಜಾರಿನ ರೂಪದಲ್ಲಿದ್ದು ಹದಗೆಟ್ಟ ಜಾಗದ ಸ್ವಲ್ಪ ಮುಂದೆ ದೊಡ್ಡ ತಿರುವನ್ನು ಹೊಂದಿದ್ದು ಇನ್ನೂ ಹೆಚ್ಚಿನ ಅಪಘಾತಕ್ಕೆ ಕಾರಣವಾಗುವ ಸಂಭವವನ್ನು ಮನಗಂಡ ಶೌರ್ಯ ವಿಪತ್ತು ತಂಡ ಮತ್ತು ಸ್ಥಳೀಯರಾದ ಹರೀಶ್ ಕುಮಾರ್ ವಳಗುಡ್ಡೆ, ಸುಧೀಂದ್ರ ಜೈನ್, ಗುರುವಪ್ಪ ನಾಯ್ಕ್ ರವರ ಸಹಕಾರದಿಂದ ತಕ್ಕಮಟ್ಟಿಗೆ ಉತ್ತಮ ರೀತಿಯಲ್ಲಿ ಸಿದ್ದಪಡಿಸಿದ್ದು ಪ್ರಯಾಣಿಕರಿಗೆ ತುಸು ಸಮಾಧಾನ ತಂದಿದೆ.

ಇದೇ ರಸ್ತೆಯನ್ನು ಸರಿಪಡಿಸುವಂತೆ ವರದಿ ಮಾಡಲು ಸುದ್ದಿ ಮಾಧ್ಯಮದ ಮುಂದೆ ಹಲವಾರು ಜನ ಕೇಳಿಕೊಂಡಿದ್ದರು.ವರದಿ ಮಾಡಿದ್ದು ಸಂಬಂಧ ಪಟ್ಟ ಪಂಚಾಯತ್ ಮತ್ತು ಅಧಿಕಾರಿಗಳು ಯಾರು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಶೌರ್ಯ ವಿಪತ್ತು ತಂಡದವರು ಸರಿಪಡಿಸಿದ್ದು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here