ಕರ್ನಾಟಕ ಗ್ಲಾಸ್ & ಪ್ಲೈವುಡ್ ಗುರುವಾಯನಕೆರೆ ಮಳಿಗೆಗೆ ಡಾಕ್ಟರ್ ಬೇಟಿ

0

ಬೆಳ್ತಂಗಡಿ: ಇತ್ತೀಚೆಗೆ ದೇರಳಕಟ್ಟೆ ಏನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಅಮರ್ ರಾವ್, ಡಾಕ್ಟರ್ ಸಂಗೀತಾ ಭಟ್, ಡಾಕ್ಟರ್ ಲೇಪಾಕ್ಷ ಹಾಗೂ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಕೋ ಓರ್ಡಿನೇಟರ್ ಶಮೀರ್ ಇವರು ಬೆಳ್ತಂಗಡಿ ತಾಲೂಕಿಗೆ ಕಾರ್ಯ ನಿಮಿತ್ತ ಭೇಟಿ ನೀಡಿದ್ದರು.

ಅವರು ಬಳಿಕ ಹಿಂದಿರುಗಿ ಹೋಗುವಾಗ ತಮ್ಮ ಪರಿಚಯದ ಗುರುವಾಯನಕೆರೆಯ ಕರ್ನಾಟಕ ಗ್ಲಾಸ್ & ಪ್ಲೈವುಡ್ ಅಂಗಡಿಗೆ ಸೌಹಾರ್ದ ಭೇಟಿ ನೀಡಿದರು.

ಅವರನ್ನು ಅಂಗಡಿಯ ಮಾಲಕರಾದ, ಬೆಳಾಲು ಅನ್ಸಾರಿಯ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಬೆಳಾಲು ಹಾಗೂ ಸಹೋದರ ಹೈದರ್ ಬೆಳಾಲು ಸ್ವಾಗತಿಸಿ ಗೌರವಿಸಿದರು.

ಆತ್ಮೀಯರಾಗಿದ್ದ ಶರೀಫ್ ಸಹೋದರರ ಕರ್ನಾಟಕ ಗ್ಲಾಸ್ & ಪ್ಲೈವುಡ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here