ಬೆಳ್ತಂಗಡಿ: ತಾಲೂಕು ಸರಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆ ಬೆಳ್ತಂಗಡಿ ಇದರ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಾಲಯ ಅರ್ಚಕ ಶ್ರೀಧರ್ ಭಟ್ ಅವರ ಪೌರೋಹಿತ್ಯದಲ್ಲಿ ಅ.20 ರಂದು ಕಸಬಾ ಗ್ರಾಮದ ಕೆಲ್ಲಗುತ್ತು ಬಳಿಯ ಸಂಸ್ಥೆಯ ನಿವೇಶನ ಜಾಗದಲ್ಲಿ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳದಾನಿ ಅಚ್ಚಿನಡ್ಕ ವೀರಮ್ಮ, ಕ.ರಾ.ಸ.ನೌ.ಸಂಘ ಬೆಳ್ತಂಗಡಿ ಶಾಖೆಯ ಗೌರವಾಧ್ಯಕ್ಷರು ಹಾಗೂ ಸ.ನೌ.ನಿ.ಸಹಕಾರಿ ಸಂಘದ ಅಧ್ಯಕ್ಷ ಡಾ.ಜಯಕೀರ್ತಿ, ಕ.ರಾ.ಸ.ನೌ.ಸಂಘದ ಅಧ್ಯಕ್ಷ ಕೆ.ಜಯರಾಜ್ ಜೈನ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ತಾರಾಕೇಸರಿ, ಪ್ರೌಢ ಶಾ.ಸ.ಶಿ.ಸಂಘದ ಅಧ್ಯಕ್ಷ ರಾಧಾಕೃಷ್ಣ, ಗ್ರೂಪ್ ಡಿ.ನೌಕರರ ಸಂಘದ ಅಧ್ಯಕ್ಷೆ ಜಯಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಬಿ.ವಿಠಲ್ ಶೆಟ್ಟಿ ಸ್ವಾಗತಿಸಿದರು.