ಗೇರುಕಟ್ಟೆಯಲ್ಲಿ ದಿ ಪ್ರೊಫೆಷನಲ್ ಕೊರಿಯರ‍್ಸ್ ಶುಭಾರಂಭ

0

ಗೇರುಕಟ್ಟೆ: ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಅಕ್ಷಯ ಫೈನಾನ್ಸ್ ಕಚೇರಿಯಲ್ಲಿ ಇತ್ತೀಚೆಗೆ ದಿ ಪ್ರೊಫೆಷನಲ್ ಕೊರಿಯರ್ ಸರ್ವೀಸ್ ಸಂಟರ್ ಶುಭಾರಂಭಗೊಂಡಿತು.

ಗೇರುಕಟ್ಟೆ ಉದ್ಯಮಿ ವೆಂಕಟರಮಣ ಪೈ ದೀಪ ಪ್ರಜ್ವಲಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕೊರಿಯರ್ ಮತ್ತು ಕಾರ್ಗೊ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ತೆರೆಯುವ ಮೂಲಕ ದೇಶ-ವಿದೇಶಗಳಲ್ಲಿರುವ ನಮ್ಮ ಬಂಧುಗಳಿಂದ ಹಾಗೂ ಅಲ್ಲಿಂದ ನಮ್ಮಗೆ ಯಾವುದೇ ಕಾಗದ ಪತ್ರ ಮತ್ತು ವಸ್ತುಗಳನ್ನು ಜವಾಬ್ದಾರಿಯಿಂದ ಕೈಸೇರಿಸುವ ಸಂಸ್ಥೆಯ ಪ್ರಯೋಜನಗಳನ್ನು ಈ ಭಾಗದ ಜನರು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪ್ರೊಫೆಷನಲ್ ಕಚೇರಿ ವಿಭಾಗದ ಮುಖ್ಯಸ್ಥ ರಾಜು ಬಿ.ಹೆಚ್, ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಸಿಬ್ಬಂದಿಗಳು, ಅಂಚೆ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯರು ಆಗಮಿಸಿ ಶುಭಹಾರೈಸಿದರು.

ಸಂಸ್ಥೆ ಪಾಲುದಾರರಾದ ಪೂರ್ಣಿಮಾ ಮತ್ತು ಸುರೇಶ್ ದಂಪತಿಗಳು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here