ಕೊಕ್ಕಡ: ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ-ಅಧ್ಯಕ್ಷರಾಗಿ ಸಂತೋಷ ಕುಮಾರ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ

0

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಳೆಂಜ ಗ್ರಾಮದ ಶಿಬರಾಜೆ ನಿವಾಸಿ ಸಂತೋಷ್ ಕುಮಾರ್ ಜೈನ್ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.ಕಾರ್ಯದರ್ಶಿ ಆಗಿ ಅಕ್ಷತ್ ರೈ ಅವರನ್ನು ಆರಿಸಲಾಯಿತು.

ಅಕ್ಟೋಬರ್ 15 ರಂದು ಶಿಬರಾಜೆ ಪಾದೆಯಲ್ಲಿನ ಗ್ರಾಮಾಭ್ಯದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್. ಪಿರೇರಾ ವಹಿಸಿದ್ದರು.

ಅಕ್ಷತ್ ಅವರು ಜೇಸಿ ವಾಣಿ ವಾಚಿಸಿದರು. ಜೆಸಿಂತಾ ಡಿ ಸೋಜ, ಜೋಸೆಫ್ ಪಿರೇರಾ, ಪಿ.ಟಿ. ಸೆಬಾಸ್ಟಿಯನ್, ಜಸ್ವಂತ್ ಪಿರೇರಾ ಮುಂತಾದ ಸದಸ್ಯರು ಶುಭ ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೆ. ಶ್ರೀಧರ್ ರಾವ್ ಅವರು ಚುನಾವಣೆಯನ್ನು ನಡೆಸಿಕೊಟ್ಟರು.ನಿತ್ಯಾನಂದ ರೈ, ಬಾಲಕೃಷ್ಣ ದೇವಾಡಿಗ, ವಿನೋದ ಗೌಡ, ಸುಖಲತಾ ರೈ, ವಸಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here