ಕಳೆಂಜ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರ ಮೇಲೆ ಪ್ರಕರಣ ದಾಖಲು-ಪೊಲೀಸರಿಂದ ತನಿಖೆ

0

ಕಳೆಂಜ: ಇಲ್ಲಿಯ ಅಮ್ಮಿನಡ್ಕ ಎಂಬಲ್ಲಿ ಅರಣ್ಯ ಇಲಾಖೆಯವರು ಲೋಲಾಕ್ಷ ಎಂಬವರ ನೂತನ ಮನೆ ನಿಮಾರ್ಣದ ಪಂಚಾಂಗ ಕೆಡವಿ ಹಾಕಿರುವ ಪ್ರಕರಣದಲ್ಲಿ ಅವರ ಪತ್ನಿ ರಕ್ಷಿತಾ ಅವರು ಧರ್ಮಸ್ಥಳ ಪೊಲೀಸರಿಗೆ ಅ.6 ರಂದು ನೀಡಿರುವ ದೂರಿನ ಆಧಾರದಲ್ಲಿ ಕಳೆಂಜ ವಲಯದ ಅರಣ್ಯಾಧಿಕಾರಿ ಪ್ರಶಾಂತ್ ಹಾಗೂ ಸಿಬ್ಬಂದಿಯವರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಿತಾರವರು ಠಾಣೆಗೆ ನೀಡಿರುವ ದೂರಿನಲ್ಲಿ ನಾವು ಹೊಸ ಮನೆ ನಿರ್ಮಿಸಲು ಕೂಲಿ ಕೆಲಸದವರೊಂದಿಗೆ ಪಂಚಾಂಗವನ್ನು ಕಟ್ಟುತ್ತಿರುವ ಸಮಯ ಕಳೆಂಜ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಮತ್ತು ಸಿಬ್ಬಂದಿಯವರು ಮನೆಯವರನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಮಾನಭಂಗಕ್ಕೆ ಯತ್ನಿಸಿದರಲ್ಲದೆ, ಇನ್ನು ಮುಂದಕ್ಕೆ ಬೇರೆ ಮನೆ ಕಟ್ಟಿದರೆ ಮನೆಗೆ ಬೆಂಕಿ ಕೊಟ್ಟು ದ್ವಂಸಗೊಳಿಸುತ್ತೇವೆ ಎಂದು ಬೆದರಿಕೆಯನ್ನು ಹಾಕಿರುವುದಾಗಿ ಆರೋಪಿಸಿದ್ದಾರೆ.

ಈ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ.ಇಂದು ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here