ಲಾಯಿಲ: ಪುತ್ರಬೈಲು ನಿವಾಸಿ ಯು.ಕೆ.ಪುಟ್ಟಪ್ಪ ನಿಧನ

0

ಬೆಳ್ತಂಗಡಿಯ ಲಾಯಿಲ ಗ್ರಾಮದ ಪುತ್ರಬೈಲು ಮನೆಯ ಯು.ಕೆ.ಪುಟ್ಟಪ್ಪ (77 ವ) ರವರು ಅ.6ರಂದು ವಯೋಸಹಜ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಯು.ಕೆ.ಪುಟ್ಟಪ್ಪ ರವರ ಕೊನೆಯ ಇಚ್ಛೆಯಂತೆ ಮರಣದ ನಂತರ ಅವರ ದೇಹವನ್ನು ವೈದ್ಯಕೀಯ ಶಿಕ್ಷಣದ ಮಕ್ಕಳಿಗೆ ಅನುಕೂಲವಾಗುವಂತೆ ಕಾಲೇಜಿಗೆ ದಾನ ಮಾಡಬೇಕಾಗಿ ಕೋರಿದ್ದರು.ಅದರಂತೆ ಅವರ ಇಚ್ಛೆಯಂತೆ ಅವರ ದೇಹವನ್ನು ಶನಿವಾರದಂದು ಎಸ್.ಡಿ.ಎಂ ಉಜಿರೆ ಕಾಲೇಜಿಗೆ ದೇಹದಾನ ಮಾಡಲಾಯಿತು.

ಯು.ಕೆ.ಪುಟ್ಟಪ್ಪ ರವರು ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ (KIOCL) ಈ ಹಿಂದೆ 25 ವರ್ಷ ಸರಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿ, ಸ್ವಯಂ ನಿವೃತ್ತಿಯ ನಂತರ ಬೆಳ್ತಂಗಡಿಯ ಪುತ್ರಬೈಲು ಇಲ್ಲಿ ವಾಸಿಸುತ್ತಿದ್ದರು.ದೇಹದಾನ ಮಾಡುವ ಮೂಲಕ ಸಮಾಜಕ್ಕೆ ಇವರು ಆದರ್ಶಪ್ರಾಯ ಆಗಿದ್ದಾರೆ.

LEAVE A REPLY

Please enter your comment!
Please enter your name here