ಬೆಳ್ತಂಗಡಿ: ಮರದ ರೆಂಬೆ ತಲೆಮೇಲೆ ಬಿದ್ದು ಗೃಹಿಣಿ ಸಾವು

0

ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರದ ರೆಂಬೆ ಕಡಿಯುವ ವೇಳೆ ಆಕಸ್ಮಿಕವಾಗಿ ರೆಂಬೆ ಮಹಿಳೆಯ ತಲೆಯ ಮೇಲೆ ಬಿದ್ದು ಅವರು ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಬೆಳ್ತಂಗಡಿ ಸಂಜಯನಗರದಲ್ಲಿ ಅ.7 ರಂದು ನಡೆದಿದೆ.

ಬೆಳ್ತಂಗಡಿ ಸಂಜಯ ನಗರದ ನಿವಾಸಿ ಬೀಡಿ ಇಸ್ಮಾಯಿಲ್ ರವರ ಪತ್ನಿ ಝೊಹರಾ (60ವ) ಮೃತಪಟ್ಟ ಮಹಿಳೆ. ಇಸ್ಮಾಯಿಲ್ ಅವರು ಅನಾರೋಗ್ಯದ ಕಾರಣಕ್ಕೆ ಶಸ್ರ್ತ ಚಿಕಿತ್ಸೆಗೊಳಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಂತೆಯೇ ಇತ್ತ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರು ಪತಿ, ಮೂವರು ಗಂಡು ಮಕ್ಕಳ ಪೈಕಿ ವಿದೇಶದಲ್ಲಿರುವ ಪುತ್ರರಾದ ಬಾತಿಶಾ ಮತ್ತು ಹಕೀಮ್, ಇನ್ನೋರ್ವ ಪುತ್ರ ಸ್ವರೂಪ್, ಇಬ್ಬರು ಪುತ್ರಿಯರಾದ ಶಮೀಮಾ ಮತ್ತು ಶಬಾನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರ ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ. ಮರಣೋತ್ತರ ಪರೀಕ್ಷೆ ಕೈಗೊಂಡ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here