ಮಚ್ಚಿನ: ಜೇನು ಕೃಷಿ ತರಬೇತಿ ಮತ್ತು ಭತ್ತದ ಕೃಷಿ ಉತ್ಪಾದನೆ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಮಡಂತ್ಯಾರು: ಕೃಷಿ ಇಲಾಖೆ ಬೆಳ್ತಂಗಡಿ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ಮತ್ತು ಮಚ್ಚಿನ ಜಲಾನಯನ ಸಮಿತಿ ಜೇನು ಕೃಷಿ ತರಬೇತಿ ಮತ್ತು ಭತ್ತದ ಕೃಷಿ ಉತ್ಪಾದನೆ ಬಗ್ಗೆ ಮಾಹಿತಿ ಕಾರ್ಯಾಗಾರ ರೈತರಿಗೆ ಮಚ್ಚಿನ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಇಂದು (ಅ.7) ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ವಹಿಸಿದ್ದರು.ಜೇನು ಕೃಷಿ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಶ್ಯಾಮ್ ಭಟ್ ತರಬೇತಿಯ ಮಾಹಿತಿ ನೀಡಿದರು.ಭತ್ತದ ಕೃಷಿ ತರಬೇತಿಯನ್ನು ಸುಲೈಮಾನ್ ಬೆಳಾಲ್ ನೀಡಿದರು.

ವೇದಿಕೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್ ಕುಮಾರ್ ಟಿ.ಎಂ, ಕೊಕ್ಕಡ ಹೋಬಳಿಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಪಂಚಾಯತ್ ಉಪಾಧ್ಯಕ್ಷರು ಸೋಮಾವತಿ ಹಾಗೂ ಪಂ.ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಲಾನಯನ ಸಹಾಯಕ ಜಯಂತ್ ಗೌಡ ನಿರೂಪಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here