ನಾವರ: ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನಾವರ: ನಾವರ ಗೋಳಿಕಟ್ಟೆಯಲ್ಲಿ ಜರಗುವ 20 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಅ.6 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ರಾವ್, ಶಾರದೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಹೆಚ್.ಪ್ರಕಾಶ್ ಶೆಟ್ಟಿ, ಪ್ರಧಾನ ಸಂಚಾಲಕರಾದ ವಿಜಯ ಕುಮಾರ್ ಜೈನ್, 2023 ಸಾಲಿನ ಅಧ್ಯಕ್ಷರಾದ ರಮಾನಾಥ ಪಾದೆಮಾರಡ್ಡ, ಕಾರ್ಯದರ್ಶಿ ಪುಷ್ಪಾವತಿ ಯೋಗಕ್ಷೇಮ ನಾವರ, ಮಾಜಿ ಅಧ್ಯಕ್ಷರಾದ ವೀರೇಂದ್ರ ಕುಮಾರ್ ಜೈನ್, ಗಿರೀಶ್ ಕುಮಾರ್, ಕುದ್ಯಾಡಿ ಗ್ರಾ.ಪಂ ಸದಸ್ಯ ರವಿ ಪೂಜಾರಿ ಹಾರಡ್ಡೆ, ಸಂಚಾಲಕರುಗಳಾದ ಸದಾನಂದ ಬಿ.ಕುದ್ಯಾಡಿ, ರಾಜೂ ಸಾಲ್ಯಾನ್ ಬಿರ್ಮೆಕ್ಯಾರ್, ನಿತ್ಯಾನಂದ ಎನ್. ಯೋಗಕ್ಷೇಮ ನಾವರ, ಸುಬ್ರಹ್ಮಣ್ಯ ಭಟ್ ಬೀಡುಮನೆ, ಮಹಿಳಾ ಸದಸ್ಯರಾದ ಸುಶೀಲಾ ಹೆಗ್ಡೆ ನಾವರ, ಗಿರಿಜಾ ಅಶೋಕ ನಗರ, ದಿನೇಶ್ ಕುಮಾರ್ ಗೋಳಿಕಟ್ಟೆ, ಅಜಿತ್ ಕುಮಾರ್ ಅಲೆಕ್ಕಿ, ಸಂಪತ್ ಶೆಟ್ಟಿ ರಾಜಪಾದೆ ಮುಂತಾದವರು ಭಾಗವಹಿಸಿದ್ದರು.

ಇದೇ ಅಕ್ಟೋಬರ್ 20 ರಂದು ಪೂಜಾ ಮಹೋತ್ಸವ ನಡೆಯಲಿರುವುದು.

LEAVE A REPLY

Please enter your comment!
Please enter your name here