ಮುತ್ತೂಟ್ ಫೈನಾನ್ಸ್ ಬೆಳ್ತಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ

0

ಬೆಳ್ತಂಗಡಿ: ಮುತ್ತೂಟ್ ಫೈನಾನ್ಸ್ ಬೆಳ್ತಂಗಡಿ ಶಾಖೆ ಸಂತೆಕಟ್ಟೆಯ ಬೃಂದಾವನ ಕಾಂಪ್ಲೆಕ್ಸ್ ಗೆ ಸ್ಥಳಂತರ ಗೊಂಡು ಅ.5 ರಂದು ಶುಭಾರಂಭಗೊಂಡಿತು.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಬಿ.ಕುಸುಮಾಧರ ಉದ್ಘಾಟಿಸಿ ಶುಭ ಹಾರೈಸಿದರು.ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಶರತ್ ಕಟ್ಟಡದ ಮಾಲಕ ಡಾ.ಜಗನ್ನಾಥ ಎಂ., ಭಾಗವಹಿಸಿ ಶುಭ ಕೋರಿದರು.

ಮಂಗಳೂರು ರೀಝನಲ್ ಮೆನೇಜರ್ ಉದಯ ಶ್ಯಾಮ್ ಖಂಡಿಗ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ರಿಝನಲ್ ಎಡ್ಮಿನ್ ರಾಹುಲ್ ರಾಘವನ್, ಅಡಿಟ್ ಮೆನೇಜರ್ ವೈಶಾಕ್, ಪುತ್ತೂರು ಕ್ಲಸ್ಟರ್ ಸಂದೇಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿ ಆರ್ ಎಸ್ ಮೆನೇಜರ್ ಪ್ರಸಾದ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಬೆಳ್ತಂಗಡಿ ಶಾಖಾಧಿಕಾರಿ ಸತ್ಯನಾರಾಯಣ ವಂದಿಸಿದರು.ಯು.ಕೆ.ಟವರ್ ಮಾಲಾಕ ಯು.ಕೆ.ಮಲ್ಲ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲಕ ಪ್ರಮೋದ್ ಆರ್.ನಾಯಕ್, ಗ್ರಾಹಕರು, ವಿವಿಧ ಶಾಖೆಗಳ ಮೆನೇಜರ್, ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here