ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಉದ್ಘಾಟನೆ

0

ಮಡಂತ್ಯಾರು: ಸೇಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ನಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಉದ್ಘಾಟನಾ ಸಮಾರಂಭವು ಸೆ.30 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಬೆಳ್ತಂಗಡಿಯ ಖ್ಯಾತ ವಕೀಲರಾದ ಬಿ.ಕೆ ಧನಂಜಯ್ ರಾವ್ ರವರು ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯನ್ನು ಉದ್ಘಾಟಿಸಿ ನಾಯಕತ್ವ ಗುಣವು ಮನೆಮನೆಗಳಲ್ಲಿ ಪ್ರಾರಂಭವಾಗಬೇಕೆಂದು ತಿಳಿಸಿದರು.ಹೊಸದಾಗಿ ಆಯ್ಕೆಯಾದ ನಾಯಕರನ್ನು ಅಭಿನಂದಿಸಿ ಅವರ ಸಾಮಾಜಿಕ ಜವಾಬ್ದಾರಿಯ ಬದ್ಧತೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೇಕ್ರೆಟ್ ಹಾರ್ಟ್ ವಿದ್ಯಾರ್ಥಿ ಸಂಸ್ಥೆಗಳ ಸಂಚಾಲಕರಾದ ರೇ.ಫಾ.ಡಾ.ಸ್ಟ್ಯಾನಿ ಗೋವಿಯಸ್ ರವರು ವಿದ್ಯಾರ್ಥಿ ಸಂಘದ ಸದಸ್ಯರಿಗೆ ಶುಭಕೋರಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರ್ ರವರು ಪ್ರಮಾಣವಚನ ಭೋಧಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಫ್ರಾನ್ಸಿಸ್ ವಿವಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜರಾಲ್ಡ್ ಮೊರಾಸ್ ರವರುಗಳು ಉಪಸಿತರಿದ್ದು ಸಮಿತಿ ಸದಸ್ಯರುಗಳಿಗೆ ಶುಭ ಕೋರಿದರು.

ವಿದ್ಯಾರ್ಥಿ, ಕ್ಷೇಮಪಾಲನಾ ಸಮಿತಿಯ ನಿರ್ದೇಶಕರಾದ ಪ್ರೊಫೆಸರ್ ಪ್ರಕಾಶ್ ಕ್ರಮಾಧಾರಿ ಕಾರ್ಯಕ್ರಮ ಸಂಘಟಿಸಿ ಸ್ವಾಗತಿಸಿದರು.ಪ್ರೊಫೆಸರ್ ಈಶ್ವರ ಗೌಡರವರು ವಂದಿಸಿದರು.ಎಮರ್ಸನ್ ಕ್ರಾಸ್ತಾ, ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು

LEAVE A REPLY

Please enter your comment!
Please enter your name here