ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿಯ ದಿನಾಚರಣೆ

0

ಬೆಳ್ತಂಗಡಿ: ಸಂತ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿಯ ದಿನವನ್ನು ಆಚರಿಸಲಾಯಿತು.ದೀಪವನ್ನು ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆಯುವ ಮುಖಾಂತರ ನಮನ ಸಲ್ಲಿಸಲಾಯಿತು ವಿದ್ಯಾರ್ಥಿಗಳು ಗಾಂಧೀಜಿ ಅವರ ಸ್ಮರಣಾರ್ಥ  ಗೀತೆಗಳನ್ನು ಹಾಡಿದರು.

ವಿದ್ಯಾರ್ಥಿನಿ ನಫಿಯಾ ರವರು ಗಾಂಧೀಜಿಯವರ ಜೀವನ ಚರಿತ್ರೆಯನ್ನು ವಿವರಿಸಿದರು.ಪ್ರಾಂಶುಪಾಲರಾದ ಭಗಿನಿ ಆರೋಗ್ಯರವರು ಹಿತನುಡಿಗಳನ್ನು ನುಡಿದರು.ವಿದ್ಯಾರ್ಥಿನಿ ಪ್ರತಿಕ್ಷರವರು ಎಲ್ಲರನ್ನು ಸ್ವಾಗತಿಸಿ ವಿದ್ಯಾರ್ಥಿ ಅಲ್ಬಿಯಾರವರು ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ವಂದಿಸಿದರು.

ಕಾಲೇಜಿನ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here