ಸೈಂಟ್ ಮೇರಿಸ್ ಓರ್ಥೋಡಕ್ಸ್ ಸಿರಿಯನ್ ಚರ್ಚ್ ಸಂಪ್ಯಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಸಂಪ್ಯಾಡಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ, ಜೆಸಿಐ ನೆಲ್ಯಾಡಿ ಇದರ ಸಹಕಾರದೊಂದಿಗೆ ಓರ್ಥೋಡಕ್ಸ್ಯೂತ್ ಮೂವ್ ಮೆಂಟ್ ಸಂಪ್ಯಾಡಿ ಇವರ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಉಜಿರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸಂಪ್ಯಾಡಿ ಚರ್ಚ್ ನ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಇದರ ಅಧ್ಯಕ್ಷರಾದ ನಾರಾಯಣ ಏನ್ ಬಲ್ಯರವರು ನೆರವೇರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ರೆ! ಫಾ! ಜೋನ್ ಚೆಮ್ಮನಮ್ ರವರು ಮಾತನಾಡಿ ಇಂತಹ ಗ್ರಾಮೀಣ ಭಾಗದಲ್ಲಿ ಈ ಚರ್ಚಿನ ಯುವಕರ ಸಂಘಟನೆ ಒಂದು ಉತ್ತಮ ದೃಷ್ಟಿಕೋನ ಇಟ್ಟುಕೊಂಡು ಸಮಾಜ ಮುಖಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ವೇಧಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ದಯಾಕರ ರೈ ರವರು ಮಾತನಾಡಿ ಚರ್ಚಿನ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಂಸಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಶ್ರೀ ಚಿದಾನಂದ ರವರು ಮಾತನಾಡಿ ಆಸ್ಪತ್ರೆಯಿಂದ ಸಿಗುವಂತಹ ಹಲವಾರು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಚರ್ಚಿನ ಕಾರ್ಯದರ್ಶಿ ಅನಿಲ್ ಟಿ. ಯು,ಖಜಾಂಚಿ ಪ್ರಕಾಶ್ ಸಿಜೆ, ಒ ಸಿ ವಯ್ ಎಂ ನ ಕಾರ್ಯದರ್ಶಿ ಶೈಲೇಶ್ ಮತ್ತು ಖಜಾಂಚಿ ಯಾದ ಶೈಜು ಟಿ.ಯು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಸಂಡೆ ಸ್ಕೂಲ್ ವಿಧ್ಯಾರ್ಥಿಗಳು, ನಿರೂಪಣೆನ್ನು ಜಾರ್ಜ್ ಟಿ. ಎಸ್, ಧನ್ಯವಾದವನ್ನು ಮಧು ಎ.ಜೆ ನೆರವೇರಿಸಿದರು.

LEAVE A REPLY

Please enter your comment!
Please enter your name here