ಕಲ್ಮಂಜ: ಗೆಳೆಯರ ಬಳಗ ಅಕ್ಷಯ ನಗರ ಗಣೇಶ್ ಚತುರ್ಥಿಯ ಪ್ರಯುಕ್ತ ಆಟೋಟ ಸ್ಪರ್ಧೆಗೆ ಚಾಲನೆ

0

ಗೆಳೆಯರ ಬಳಗ ಅಕ್ಷಯ ನಗರ ನಿಡಗಲ್ ಕಲ್ಮಂಜ ಇದರ 24 ನೇ ವರ್ಷದ ಗಣೇಶ್ ಚತುರ್ಥಿ ಪ್ರಯುಕ್ತ ಆಟೋಟ ಸ್ಪರ್ಧೆಯು ನಿತಿನ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ದಿ. ಮಹಾವೀರ ಜೈನ್, ಹುಣಿಪ್ಪಾಜೆ ಇವರ ಸ್ಮರಣಾರ್ಥ ಗ್ರಾಮ ದೈವ ಕಲ್ಕುಡ ಅಕ್ಷಯನಗರ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಧರ್ಮಪ್ಪ ಲಿಂಗಾಯಿತ ನೆರೆವೇರಿಸಿದರು.

ಗೌರವಾಧ್ಯಕ್ಷತೆಯನ್ನು ಹುಣಿಪ್ಪಾಜೆ ಜೈನ ಬಸದಿಯ ಅಡಳಿತ ಮೊಕ್ತೇಸರರಾದ ರತನ್ ಕುಮಾರ್ ಜೈನ್ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ವೇಣೂರು ಪೊಲೀಸ್ ಠಾಣೆಯ ರಾಮಯ್ಯ ಹೆಗ್ಢೆ , ಊರಿನ ಹಿರಿಯರಾದ ದೇಶಪ್ಪ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ನವಿನಾಕ್ಷಿ, ಸಿಎ ಬ್ಯಾಂಕ್ ಮುಂಡಾಜೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಚಂದ್ರಕಾಂತ ಪ್ರಭು , ಸತ್ಯನಾರಾಯಣ ಹೊಳ್ಳ ಉಪಸ್ಥಿತಿಯಿದ್ದರು.

ಕಾರ್ಯಕ್ರಮವನ್ನು ಅಶೋಕ್ ಇವರು ಸ್ವಾಗತಿಸಿ, ಸುಬ್ರಾಯ ವಂದಿಸಿ, ನೆಲ್ಸನ್ ನಿರೂಪಿಸಿದರು.

LEAVE A REPLY

Please enter your comment!
Please enter your name here