ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಶಿಬರಾಜೆಯ ಪಾದೆಯಲ್ಲಿ ಸ್ವಚ್ಛತಾ ಕಾರ್ಯ

0

ಶಿಬರಾಜೆ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಶಿಬರಾಜೆಯ ಪಾದೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಇಲ್ಲಿನ ಅಂಗನವಾಡಿ ಮತ್ತು ಗ್ರಾಮಭ್ಯುದಯ ಅನುಷ್ಠಾನ ಸಮಿತಿ, ಜೆ ಸಿ ಐ ಕೊಕ್ಕಡ ಕಪಿಲ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಅ 1ರಂದು ನಡೆಯಿತು.

ಕಾರ್ಯಕ್ರಮದ ಸ್ವಾಗತವನ್ನು ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ರವರು ನೆರವೇರಿಸಿದರು.

ಪ್ರತಿಜ್ಞಾವಿಧಿಯನ್ನು ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ ರವರು ಭೋಧಿಸಿದರು.

ಅಂತರ ಶಿಬರಾಜೆ ಪಾದೆಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಪ್ರತಿಮಾ ನಾರಾಯಣ ರವರು ಸದಸ್ಯರುಗಳಾದ ಜಯವರ್ಮ ಜೈನ್, ಸೆವ್ರಿನ್, ಮತ್ತು ಲಕ್ಷ್ಮೀನಾರಾಯಣರವರು, ಗ್ರಾಮಭ್ಯುದಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪಿ ಟಿ ಸಬಾಸ್ಟಿನ್ ರವರು, ಜೆಸಿಐ ಸದಸ್ಯರುಗಳಾದ ಶ್ರೀ ಜೆಸಿ ಸಂತೋಷ್ ಜೈನ್, ಜೆಸಿ ಅಕ್ಷತ್ ರೈ, ಅರಣ್ಯ ಸಮಿತಿಯ ಅಧ್ಯಕ್ಷರಾದ ಧನಂಜಯ ಗೌಡ, ಕಳೆಂಜ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮ ಬಿ ಎಸ್, ಸಿ ಎ ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಸಂಜೀವಿನಿ ಕೃಷಿ ಸಕ್ಕಿ ಸುಮಿತ್ರ ರವರು ಹೊನ್ನಪ್ಪ ಗೌಡ ರಾಘವ ಗೌಡ ಬಲ್ಕಾಜೆ, ಧನುಷ್ ಧನ್ಯ ಬಾಬು ರೈ ನಾರಾಯಣ ಮಾರ್ತಾಡಿ, ಅಶ್ವಥ್, ಅಮೃತ್, ಅಂಗನವಾಡಿ ಪುಟಾಣಿಗಳಾದ ಅಭಿಶ್ಟವರ್ಮ ಆಲ್ಸಿಟರಿಯಾ, ಉಪಸ್ಥಿತರಿದ್ದರು.

ಜೆಸಿ ಅಕ್ಷತ್ ರೈ ರವರು ಸಿಹಿತಿಂಡಿ ವಿತರಿಸಿದರು.ಅಂಗನವಾಡಿ ಸಹಾಯಕಿ ಅನ್ಸಿಲ್ಲಾ ರವರು ಧನ್ಯವಾದ ನೆರವೇರಿಸಿದರು.

LEAVE A REPLY

Please enter your comment!
Please enter your name here