ಕಾನರ್ಪ: ಆನೆ ದಾಳಿಯಿಂದ ಭತ್ತ ಕೃಷಿ ನಾಶ- ಆನೆಯನ್ನು ಕಾಡಿಗಟ್ಟುವ ಪ್ರಯತ್ನಗಳು ನಡೆದರೂ ಕೃಷಿ ಭೂಮಿ ಮೇಲೆ ಆನೆ ದಾಳಿ ಮುಂದುವರೆಯುತ್ತಿದೆ

0

ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಎರುಬಳ್ಳಿ ಬೊಮ್ಮಣ್ಣ ಗೌಡ ಹಾಗೂ ಬೆದ್ರಡಿ ನಾರಾಯಣ ಗೌಡ ಅವರ ಭತ್ತದ ಕೃಷಿಗೆ ಆನೆಗಳು ನುಗ್ಗಿ, ಸುಮಾರು ಮೂರು ಎಕ್ರೆಗೂ ಅಧಿಕ ಸ್ಥಳದಲ್ಲಿ ಹಾನಿ ಮಾಡಿವೆ.

ಒಂದು ವಾರದಿಂದ ಈ ಭಾಗದ ಫಣಿಕಲ್, ಹಿತ್ತಿಲಕೊಡಿ ಪರಿಸರದಲ್ಲಿ ಅನೆಗಳು ನಿರಂತರವಾಗಿ ಕೃಷಿಗೆ ಹಾನಿ ಮಾಡುತ್ತಿವೆ.

ಅರಣ್ಯ ಇಲಾಖೆ ಮೆಣಸಿನ ಹೊಗೆ ಪ್ರಯೋಗದ ನಡುವೆಯೂ ಆನೆಗಳ ಹಿಂಡು ಊರಿಂದ ಊರಿಗೆ ಸಂಚರಿಸಿ ದಾಳಿ ಪ್ರಮಾಣ ಹೆಚ್ಚಿಸುತ್ತಲೇ ಇವೆ.ಇದರಿಂದ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಇಷ್ಟಾದರೂ ಸರಕಾರ ಅಥವಾ ಸಂಬಂಧಪಟ್ಟ ಸಚಿವರು ಗಮನ ಹರಿಸದಿರುವುದು ಕೃಷಿಕರನ್ನು ಆಕ್ರೋಶ ಹುಟ್ಟಿಸುವಂತೆ ಮಾಡಿದೆ.

LEAVE A REPLY

Please enter your comment!
Please enter your name here