ಧರ್ಮಸಂರಕ್ಷಣ ಯಾತ್ರೆ-ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕದ್ರಿ, ಕೊಲ್ಲೂರಿನಿಂದ ರಥಯಾತ್ರೆ-ಇಂದು ಸಂಕಲ್ಪ ದಿನ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೊನೆಗೊಳ್ಳಬೇಕು. ಹಿಂದೂ ಶ್ರದ್ಧಾಕೇಂದ್ರದ ವಿರುದ್ಧದ ದಾಳಿ ನಿಲ್ಲಬೇಕು ಅನ್ನುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ಧರ್ಮ ಸಂರಕ್ಷಣ ಯಾತ್ರೆ ಆಯೋಜಿಸಲಾಗಿದೆ.

ಕೊಲ್ಲೂರು ಮೂಕಾಂಬಿಕ ಕ್ಷೇತ್ರ ಮತ್ತು ಕದ್ರಿ ಮಂಜುನಾಥನ ಸನ್ನಿಧಿಯಿಂದ ಯಾತ್ರೆ ಹೊರಡಲಿದೆ. ಈ ಹಿನ್ನಲೆಯಲ್ಲಿ ಇಂದು ವಿವಿಧ ದೇವಸ್ಥಾನಗಳಲ್ಲಿ ಸಂಕಲ್ಪ ದಿನದ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯೆದುರು ಸಂಕಲ್ಪವನ್ನು ಕೈಗೊಳ್ಳಲಾಯಿತು.

ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಸಂಕಲ್ಪ ಪ್ರಾರ್ಥನೆ ನಡೆದಿದೆ. ಅಪಾರ ಸಂಖ್ಯೆಯಲ್ಲಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಭಕ್ತರು ಆಗಮಿಸಿ ಸಂಕಲ್ಪದಲ್ಲಿ ಭಾಗಿಯಾದರು. ಈ ವೇಳೆ, ಧರ್ಮಸ್ಥಳದ ಭಕ್ತರು, ಪ್ರಮುಖರಾದ ವೀರೂ ಶೆಟ್ಟಿ, ಸುಬ್ರಹ್ಮಣ್ಯ ಪ್ರಸಾದ್, ಶ್ರೀನಿವಾಸ ರಾವ್, ದಿವಾಕರ್, ಭಾಸ್ಕರ್ ಧರ್ಮಸ್ಥಳ, ಧನಕೀರ್ತಿ ಆರಿಗ, ಪಾರ್ಶ್ವನಾಥ ಜೈನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಗವದ್ ಭಕ್ತರು ಸೇರಿದ್ದರು.

LEAVE A REPLY

Please enter your comment!
Please enter your name here