ಸ್ವಾತಿ ಮೊಬೈಲ್ ಝೋನ್ ಶುಭಾರಂಭ

0

ಬೆಳ್ತಂಗಡಿ: ಇಲ್ಲಿಯ ಅನುರಾಗ್ ಕಾಂಪ್ಲೆಕ್ಸ್ ನಲ್ಲಿ ಸ್ವಾತಿ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ಸೆ. 27ರಂದು ಶುಭಾರಂಭಗೊಂಡಿದೆ.

ಕನ್ಯಾಡಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶರಾದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ವ. ಫಾ. ಅಬ್ರಹಾಂ ಪಟ್ಟೇರಿಲ್, ಅನುರಾಗ್ ಕಾಂಪ್ಲೆಕ್ಸ್ ಮಾಲಕಿ ಜಯಂತಿ ಪೈ, ಸುವರ್ಣ ಕಾಂಪ್ಲೆಕ್ಸ್ ಮಾಲಕ ಭಾನು ಪ್ರಸನ್ನ, ನಿವೃತ್ತ ಬ್ಯಾಂಕ್ ಮೆನೇಜರ್ ರಾಮ ಮೊಯ್ಲಿ, ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ಮೊಯ್ಲಿ ಮಾಲಕರ ಮಾತೃಶ್ರೀ ಸುಂದರಿ, ನಿವೃತ್ತ ಯೋಧ ಶಿವ ಕುಮಾರ್, ಉಮೇಶ್ ಕುಲಾಲ್, ಪ್ರೇಮರಾಜ್ ಸಿಕ್ವೇರಾ, ಅರವಿಂದ ಲಾಯ್ಲ, ಮಾಜಿ ಸೈನಿಕ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕ ಹರೀಶ್ ಕುಮಾರ್ ಸ್ವಾಗತಿಸಿ ವಂದಿಸಿ ಸತ್ಕರಿಸಿದರು.ಹಾಗೂ ಇಲ್ಲಿ ಹೊಸ ಮೊಬೈಲ್ ಸೇಲ್ಸ್ ಮತ್ತು ಸೆರ್ವಿಸ್ ಗಳು ಲಭ್ಯ ವಿದೆ ಎಂದು ತಿಳಿಸಿ ಸರ್ವರ ಸಹಕಾರ ಕೋರಿದರು

LEAVE A REPLY

Please enter your comment!
Please enter your name here