ಮಾಲಾಡಿ: ರ್‍ಯಾಂಬೋ ಇಂಜಿನಿಯರಿಂಗ್ ಮತ್ತು ಇಂಡಸ್ಟ್ರೀಸ್‌ ಶುಭಾರಂಭ

0

ಮಾಲಾಡಿ: ಸೋಣಂದೂರಿನಲ್ಲಿ ನೂತನವಾಗಿ ಶುಭಾರಂಭಗೊಂಡ ರ್‍ಯಾಂಬೋ ಇಂಜಿನಿಯರಿಂಗ್ ಮತ್ತು ಇಂಡಸ್ಟ್ರೀಸ್‌ ನ ಉದ್ಘಾಟನೆಯನ್ನು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಂಶಿಕ ಮುಖ್ಯಸ್ಥ ಶರತ್ ಕೃಷ್ಣ ಪಡ್ವೆಟ್ನಾಯ ರವರು ನೆರವೇರಿಸಿ, ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅನುಗ್ರಹ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉಜಿರೆಯ ಪ್ರಾಂಶುಪಾಲ ವಂ.ವಿಜಯ್ ಲೋಬೊ ರವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ಜೋಯೆಲ್ ಮೆಂಡೊನ್ಸಾ, ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದ.ಕ ಪ್ರವೀಣ್ ಫೆರ್ನಾಂಡಿಸ್, ಮಾಲಾಡಿ ಗ್ರಾ.ಪಂ.ಉಪಾಧ್ಯಕ್ಷ ಸೆಲೆಸ್ತಿನ್ ಡಿಸೋಜಾ, ಉಜಿರೆ ಗ್ರಾ.ಪಂ ಸದಸ್ಯ ಅನಿಲ್ ಪ್ರಕಾಶ್ ಡಿಸೋಜಾ, ಸ.ಹಿ.ಪ್ರಾ.ಶಾಲೆ ಪುತ್ತಿಲ ಶಿಕ್ಷಕಿ ಮಾರ್ಸೆಲಿನ್ ಸಲ್ಡಾನ್ಹಾ, ಜಾಗ ಒದಗಿಸಿ ಕೊಟ್ಟವರು ಹಾಗು ಹಿತಚಿಂತಕರಾದ ಅರ್ವಿನ್ ಲೋಬೊ, ಸಂಸ್ಥೆಯ ಹಿತೈಷಿಯಾದ ಉದಯ ಕಿಶೋರ್ ಶೆಟ್ಟಿ, ಉಜಿರೆ ಸಂತ ಅಂತೋನಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಉಜಿರೆ ವರ್ತಕ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ದಿಶಾ ಫುಡ್ ನ ಅರುಣ್ ಕುಮಾರ್, ಅರುಣ್ ರೆಬೆಲ್ಲೊ, ನೆಲ್ಸನ್ ಮೋನಿಸ್, ಗ್ರೇಸಿ ಸಲ್ಡಾನ, ರೋಹನ್ ಸಲ್ಡಾನ ಮಾಲಕ ರೆಜಿನಾಲ್ಡ್ ಸಲ್ಡಾನ, ಗುತ್ತಿಗೆದಾರ ಹೆರಾಲ್ಡ್ ಡಿಸೋಜಾ, ಅರುಣ್ ಡಿಸೋಜಾ, ಗುತ್ತಿಗೆದಾರ ಮೆಲ್ವಿನ್ ಕೊರೆಯ, ಸೈನ್ಟ್ ಸೆಬಾಸ್ಟಿಯನ್ ಇಂಜಿನಿಯರಿಂಗ್ ಮಾಲಕ ಆಂಟೋನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here