ಸುಧನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಇಲ್ಲಿಯ ದ್ವಾರಕಾ ಡ್ರೈವಿಂಗ್ ಸ್ಕೂಲ್ ಎದುರು ಕಾಮತ್ ಸ್ಟೋರ್ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುಧನ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯು ಸೆ.23ರಂದು ನಮ್ಮ ಮನೆ-ಹವ್ಯಕ ಭವನ ಗುರುವಾಯನಕೆರೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.ವಿ.ಭಟ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಸಂಘವು 549 ಸದಸ್ಯರನ್ನು ಹೊಂದಿದ್ದು, ರೂ.8,92,000 ಪಾಲು ಬಂಡವಾಳ ದೊಂದಿಗೆ ರೂ.10768348/-ದುಡಿಯುವ ಬಂಡವಾಳ ಹೊಂದಿದೆ. ರೂ.7891237/- ಮಿಕ್ಕಿದ ಠೇವಣಿ ಹೊಂದಿದ್ದು, ರೂ.73ಲಕ್ಷ ಸಾಲ ವಿತರಿಸಲಾಗಿದೆ.

ಸಂಘದಲ್ಲಿ ಸಾರ್ವಜನಿಕ ಸೇವೆಯ ಉದ್ದೇಶದಿಂದ ಇ-ಸ್ಟ್ಯಾಂಪಿಂಗ್ ಸೌಲಭ್ಯ, ಗೋ ಗ್ರಾಸ್ ನಿಧಿ ತೆರೆದು ನವೋತ್ಪನ್ನಗಳ ಮಾರಾಟ ವ್ಯವಸ್ಥೆ ಲಭ್ಯವಿದೆ.

ಸಂಘದ ಉಪಾಧ್ಯಕ್ಷ ಎಂ.ಪರಮೇಶ್ವರ ಭಟ್, ನಿರ್ದೇಶಕರುಗಳಾದ ಬಾಲ್ಯ ಶಂಕರ ಭಟ್, ಯು.ಎಸ್.ವಿಶ್ವೇಶ್ವರ ಭಟ್, ಕೆ.ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಕೆ, ಜಿ.ಪಿ ಶ್ಯಾಮ್ ಭಟ್, ವೆಂಕಪ್ಪಯ್ಯ, ಸುಮಂಗಲ ಕೆ, ಶ್ರೀದೇವಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್.ಬಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ನಿರ್ದೇಶಕ ಬಾಲ್ಯ ಶಂಕರ್ ಭಟ್ ಸ್ವಾಗತಿಸಿ, ಕೆ.ಉಪಾಧ್ಯಕ್ಷ ಎಂ.ಪರಮೇಶ್ವರ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here