ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ ಹಾಗೂ ವಾಸ್ತವ ಸಭೆ- ರೂ.5.52ಲಕ್ಷ ನಿವ್ವಳ ಲಾಭ, ಶೇ.12% ಡಿವಿಡೆಂಟ್ ಘೋಷಣೆ

0

ಬೆಳ್ತಂಗಡಿ: ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ ಹಾಗೂ ವಾಸ್ತವ ಸಭೆ ಸೆ.18ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ಒಟ್ಟು 1133 ಸದಸ್ಯರಿದ್ದು ರೂ.18,14,820 ಪಾಲು ಬಂಡವಾಳ ಹೊಂದಿದೆ. ರೂ.5ಕೋಟಿ ಠೇವಣಿ ಯೊಂದಿಗೆ ರೂ.24.99 ಕೋಟಿ ವ್ಯವಹಾರ ನಡೆಸಿ ರೂ 5ಲಕ್ಷ 52 ಸಾವಿರ ಲಾಭ ಗಳಿಸಿ ಶೇ.12% ಡಿವಿಡೆಂಡ್ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಘೋಷಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರುಗಳಾದ ವಿನ್ಸೆಂಟ್ ಟಿ.ಡಿಸೋಜ, ಜಾನ್ ಅರ್ವಿನ್ ಡಿಸೋಜ, ಎಲೋಸಿಯಸ್ ಎಸ್.ಲೋಬೊ, ಜಾನ್ ಆಲ್ವಿನ್ ಪಿಂಟೊ ಮ್ಯಾಕ್ಸಿಮ್ ಡಿಕೋಸ್ಟಾ, ಬೆನೆಡಿಕ್ಟ್ ವೇಗಸ್, ಕು.ತಿಯೋಫಿಲಾ ಡಿಸೋಜ, ಸ್ಟೆಲ್ಲಾ ಫ್ರಾಂಕ್, ಸೆಲಿನ್ ನೊರೋನಾ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘದ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಸ್ವಾಗತಿಸಿ, ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ವಂದಿಸಿದರು.ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಸಿಬಂದಿಗಳು ಸಹಕರಿಸಿದರು.ಲಕ್ಕಿ ಕೂಪನ್ ಡ್ರಾ ನಡೆಯಿತು.ಅಡಿಕೆ ಕೃಷಿಗೆ ಬಳಸುವ ಡಾ.ಸಾಯಿಲ್ ಬಗ್ಗೆ ಮಾಹಿತಿ, ಬಳಸುವ ವಿಧಾನ ಬಗ್ಗೆ ತಿಳಿಸಿದರು.

LEAVE A REPLY

Please enter your comment!
Please enter your name here