ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ಯಕ್ಷಗಾನ ನಾಟ್ಯ ಕಲಾ ಕೇಂದ್ರ ಉದ್ಘಾಟನೆ

0

ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ಯಕ್ಷಗಾನ ನಾಟ್ಯ ಕಲಾ ಕೇಂದ್ರ ಸೆ.17ರಂದು ಶ್ರೀ ರಾಮ ಭಜನಾ ಮಂದಿರ ಕೊಕ್ಕಡ ಉದ್ಘಾಟನೆಗೊಂಡಿತು.

ವೇದಮೂರ್ತಿ ಶ್ರೀ ಬಾಲಕೃಷ್ಣ ಕೆದಿಲಾಯ, ಶ್ರೀ ನಾರಾಯಣ ಶೆಟ್ಟಿ ಕುಂಡಡ್ಕ, ಶ್ರೀ ಕುಶಾಲಪ್ಪ ಗೌಡ ಪೂವಾಜೆ, ಶ್ರೀ ಈಶ್ವರ ಭಟ್ ಹಿತ್ತಿಲು ಮನೆ, ಶ್ರೀ ಬಾಲಕಷ್ಣ ನೈಮಿಷ, ಡಾ ಗಣೇಶ್ ಪ್ರಸಾದ್, ನಾಟ್ಯ ಗುರುಗಳಾದ ಶ್ರೀ ಸುಂದರ ಗೌಡ ಮುಳಿತ್ತಡ್ಕ, ವೇದಿಕೆಯಲ್ಲಿ ಉಪ್ಥಿತರಿದ್ದರು.ಅಥಿತಿಗಳಿಂದ ಉದ್ಗಾಟನಾ ಕಾರ್ಯಕ್ರಮ ನೆರವೇರಿತು.

ಅಕ್ಷಯ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು.ಕೇಂದ್ರದ ಮೇಲ್ವಿಚಾರಕ ರಂಜಿತ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.ಹಿಮ್ಮೆಲನದಲ್ಲಿ ದೇವರ ಸ್ತುತಿಯೊಂದಿಗೆ ಯಕ್ಷಗಾನ ಹಾಡಿನಲ್ಲಿ ಭಾಗವತರಾಗಿ ನಾರಾಯಣ ಕುಂಡಡ್ಕ ಮದ್ದಳೆಯಲ್ಲಿ ಪದ್ಮನಾಭ ಗೌಡ ಶಿಶಿಲ, ಚೆಂಡೆ ಹರಿಪ್ರಸಾದ್ ಇಚಿಲಂಪಾಡಿ, ಕೇಂದ್ರದ ನಾಟ್ಯ ಗುರುಗಳು ಎಲ್ಲರನ್ನೂ ವಂದಿಸಿದರು.ನಂತರ ತರಗತಿ ನಡೆದವು.

LEAVE A REPLY

Please enter your comment!
Please enter your name here