ಆನೆಗಳು ಕೃಷಿಯನ್ನು ಹಾನಿ ಮಾಡಿರುವ ಬಗ್ಗೆ ಕ್ರಮಕೈಗೊಳ್ಳುವಂತೆ ಧರ್ಮಸ್ಥಳ ಸಾರ್ವಜನಿಕರಿಂದ ಅರಣ್ಯ ಅಧಿಕಾರಿಗೆ ಮನವಿ

0

ಧರ್ಮಸ್ಥಳ: ಕಳೆದ ಎರಡು ವಾರಗಳಿಂದ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ನೇರ್ತನೆ ಮುಳಿಕ್ಕಾರು ಭಾಗಗಳಲ್ಲಿ ಆನೆಗಳು ಬರುತ್ತಿದ್ದು ಕೃಷಿಗೆ ಹಾನಿ ಮಾಡುತ್ತಿರುವುದಲ್ಲದೆ ಸಾರ್ವಜನಿಕರಿಗೆ ಮತ್ತು ಕೃಷಿಕರಿಗೆ ತುಂಬಾ ಅಪಾಯವಿರುವುದರಿಂದ ಆನೆಗಳನ್ನು ಈ ಗ್ರಾಮದಿಂದ ಓಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ರಿಗೆ ಸೆ.15 ರಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಪಂಚಾಯತ್ ಸದಸ್ಯರುಗಳು, ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್.ಡಿ., ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ಊರಿನ ನಾಗರೀಕರು ಹಾಜರಿದ್ದರು.

LEAVE A REPLY

Please enter your comment!
Please enter your name here