ಚಾರ್ಮಾಡಿ: ಕಾಡಾನೆ ದಾಳಿ- ಅಪಾರ ಕೃಷಿ ನಾಶ

0

ಬೆಳ್ತಂಗಡಿ: ತಾಲೂಕಿನ ಹಲವು ಕಡೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಮತ್ತೆ ಕಾಡಾನೆ ಚಾರ್ಮಾಡಿ ಪರಿಸರದಲ್ಲಿ ಕಂಡು ಬಂದಿದ್ದು, ಮುಗುಳಿದಡ್ಕ ಸೇಸಪ್ಪ ಗೌಡ ಅವರ ತೋಟಕ್ಕೆ ಕಳೆದ ಎರಡು ದಿನಗಳ ಹಿಂದೆ ನುಗ್ಗಿದ ಕಾಡಾನೆಗಳು ಅಡಿಕೆ ಮರ ಹಾಗೂ ತೆಂಗಿನ ಮರಗಳನ್ನು ನಾಶಮಾಡಿದೆ.

ಕಾಡಾನೆಗಳು ಅಲ್ಲಲ್ಲಿ ದಾಳಿ ನಡೆಸುತ್ತಿದ್ದು, ಒಂದೇ ಹಿಂಡಿನಿಂದ ದಾಳಿ ನಡೆಯುತ್ತಿದೆಯೇ, ಅಥವಾ ಇನ್ನಷ್ಟು ಕಾಡಾನೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here