ಕೊಕ್ಕಡದಲ್ಲಿ 49 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಕೊಕ್ಕಡ: ಶ್ರಿ ಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿ ಕೊಕ್ಕಡ ಇದರ ವತಿಯಿಂದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಸೆ.9 ರಂದು ಕೊಕ್ಕಡ ಶಾಲಾ ಮೈದಾನದಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ, ಆಟೋಟ ಕಾರ್ಯಕ್ರಮ ನೆರವೇರಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಕಾರ್ಯದರ್ಶಿ ವಿಲ್ಫ್ರ್ ಡ್ ಪಿಂಟೋ ಸ್ವಾಗತಿಸಿದರು.

ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ಇದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ದ್ವೆಯ ವಾಕ್ಯದೊಂದಿಗೆ ಸಂದೇಶವನ್ನು ಸಾರಿದರು.

ಈ ಸಂದರ್ಬದಲ್ಲಿ ಅಳದಂಗಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಿನ್ನಪ್ಪ ಪೂಜಾರಿ ಕಾಪಿನಡ್ಕ, ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್,ಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್. ಕೆ.ಹಕೀಮ್, ಶ್ರಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷ ಗಣೇಶ್ ಕಾಶಿ, ಉಪಾಧ್ಯಕ್ಷ ದಯನಿಷ್ ಗೌಡ, ರಝಾಕ್ ಎಂ. ಎಚ್, ಉಮೇಶ್ ಬಂಗೇರ ಕಾಪಿನಡ್ಕ, ಕಲಂದರ್ ಎಂ.ಏಚ್.ಉಪಸ್ಥಿತರಿದ್ದರು.

ಈ ಸಮಯದಲ್ಲಿ ನಾಗೇಶ್ ಕುಮಾರ್, ಹಾಗೂ ಜಿನ್ನಪ್ಪ ಪೂಜಾರಿ ಕಾಪಿನಡ್ಕ ಇವರನ್ನು ಗೌರವಿಸಲಾಯಿತು.ರಾಜ್ ಗೋಪಾಲ್ ಬೆನಕ ಕಾರ್ಯಕ್ರಮ ನಿರ್ವಹಿಸಿ ಸುನಿಷ್ ನಾಯ್ಕ್ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here