ಸೆ.17: ಶ್ರೀ ವೈದ್ಯನಾಥೇಶ್ವರ ಯಕ್ಷಗಾನ ನಾಟ್ಯ ಕಲಾ ಕೇಂದ್ರ ಉದ್ಘಾಟನೆ

0

ಕೊಕ್ಕಡ: ಸೆ.17ರಂದು ಸಂಜೆ ಗಂಟೆ 4.00ಕ್ಕೆ ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಶ್ರೀ ವೈದ್ಯನಾಥೇಶ್ವರ ಯಕ್ಷಗಾನ ನಾಟ್ಯ ಕಲಾ ಕೇಂದ್ರ ಉದ್ಘಾಟನೆಗೊಳ್ಳಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ,
ಹಿರಿಯ ಭಾಗವತರಾದ ನಾರಾಯಣ ಶೆಟ್ಟಿ ಕುಂಡಡ್ಕ, ಶ್ರೀ ರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಈಶ್ವರ ಭಟ್ ಹಿತ್ತಿಲು ಮನೆ, ನೈಮಿಷ ಹೌಸ್ ಆಫ್ ಸ್ಪೈಸಸ್ ನ ಬಾಲಕೃಷ್ಣ ನೈಮಿಷ, ಕೊಕ್ಕಡ ಅಂಬಿಕಾ ಕ್ಲಿನಿಕ್ ನ ಡಾ.ಗಣೇಶ್ ಪ್ರಸಾದ್ ಇವರು ಅತಿಥಗಳಾಗಿ ಭಾಗವಹಿಸುವರು.

ಕೊಕ್ಕಡ ಪರಿಸರದಲ್ಲಿರುವ ಯಕ್ಷಗಾನ ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒದಗಿದ್ದು, ಪ್ರತೀ ಭಾನುವಾರ ಸಂಜೆ ಗಂಟೆ 3.30ರಿಂದ 5.30ರ ತನಕ ತರಗತಿ ನಡೆಯುತ್ತದೆ.ಯಕ್ಷಗಾನ, ನಾಟ್ಯಗಾರಿಕೆ, ಬಣ್ಣಗಾರಿಕೆ, ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಇದ್ದಲ್ಲಿ ಹಿಮ್ಮೇಳ ತರಬೇತಿಯು ನೀಡಲಾಗುವುದು ಎಂದು ತರಬೇತಿ ಕೇಂದ್ರದಿಂದ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here