ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ರಾತ್ರಿ ವೇಳೆ ಏರ್ ಗನ್ ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರ ಬಂಧನ

0

ಶಿಶಿಲ: ಸಪ್ಟೆಂಬರ್4 ರಂದು ಶಿಶಿಲ ಗ್ರಾಮದ ಹೇವಾಜೆ ಎಂಬಲ್ಲಿ ಮೀಯಾರು ರಕ್ಷಿತ ಅರಣ್ಯಕ್ಕೆ ಸಂಬಂಧಪಟ್ಟಂತೆ ಉಪ್ಪಿನಂಗಡಿ ವಲಯದ ಅರಣ್ಯ ಸಿಬ್ಬಂದಿಗಳು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮದ ಪಿಲಿಕಲ ಎಂಬಲ್ಲಿಯ ಪ್ರಮೋದ್ (23) ಪ್ರಕಾಶ್ (22) ರವರು ರಾತ್ರಿ ವೇಳೆ ಏರ್ ಗನ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದ್ದು ಅರಣ್ಯ ಸಿಬ್ಬಂದಿಗಳು ಅವರನ್ನು ಬಂಧಿಸಿ ಏರ್ ಗನ್ ಮತ್ತು ಬೈಕನ್ನು ಅಮಾನತುಪಡಿಸಿರುತ್ತಾರೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಮಾರ್ಗದರ್ಶನದಲ್ಲಿ ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಉಪವಲಯ ಅರಣ್ಯಾಧಿಕಾರಿ ಭರತ್,ಅರಣ್ಯ ಪಾಲಕ ಸನತ್,ವಿನಯಚಂದ್ರ, ರಾಜೇಶ್,ಲಿಂಗಪ್ಪ ಸುನಿಲ್ ನಾಯ್ಕ್ ಚಾಲಕ ಕಿಶೋರ್ ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here