ವಲಯ ಮಟ್ಟದ ಕಬಡ್ಡಿ ಪಂದ್ಯಾಟ-ಉರುವಾಲು ಶ್ರೀ ಭಾರತೀ ಆಂ.ಮಾ.ಪ್ರೌಢ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಉರುವಾಲು: ಇಲ್ಲಿನ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ವಿಭಾಗದ ವಿದ್ಯಾರ್ಥಿಗಳು ಸೆ.4 ರಂದು ಕರಾಯ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ದಲ್ಲಿ ಮೊದಲನೇ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ.ಭಾಗವಹಿಸಿದ ವಿದ್ಯಾರ್ಥಿಗಳು 7ನೇ ತರಗತಿಯ ನಿಶಾಂತ್, ನಂದನ್, ಜ್ಞಾನೇಶ್, ಪ್ರಸನ್ನ, ಪ್ರಮಿತ್, ಅರ್ಪಿತ್, ಪ್ರಣಿತ್, ವೈಶಾಕ್,ರಮಿತ್, 6 ನೇ ತರಗತಿಯ ಯಜ್ನೇಶ್ ಹಾಗೂ ಕಾರ್ತಿಕ್.

ಶಾಲಾ ದೈಹಿಕ ಶಿಕ್ಷಕಿಯಾದ ವಿಂಧ್ಯಾ ಇವರಿಗೆ ತರಬೇತಿ ನೀಡಿದ್ದಾರೆ.ಪ್ರಶಸ್ತಿ ಗೆದ್ದು ಬಂದ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here