ಬ್ಯಾಂಕ್ ಆಫ್ ಬರೋಡದ ಬ್ಯಾಂಕ್ ಮಿತ್ರನಾಗಿ ಅರಸಿನಮಕ್ಕಿಯ ಶ್ರೀನಿಧಿ ಜನಸೇವಾ ಕೇಂದ್ರ

0

ಅರಸಿನಮಕ್ಕಿ: ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಮಿತ್ರನಾಗಿ ಗಣೇಶ್ ಕೆ ಹೊಸ್ತೋಟ ಇವರ “ಶ್ರೀನಿಧಿ ಜನಸೇವಾ ಕೇಂದ್ರ” ಅರಸಿನಮಕ್ಕಿಯಲ್ಲಿ ಕಾರ್ಯಾರಂಭಿಸಲಿದ್ದು, ಇದರ ಉದ್ಘಾಟನೆಯು ಸೆ.4 ರಂದು ನಡೆಯಿತು.

ಉದ್ಘಾಟನೆಯನ್ನು ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಹಾಗೂ ಗ್ರಾ.ಪಂ.ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿಶಿಲ ಬ್ಯಾಂಕ್ ಆಫ್ ಬರೋಡದ ಉದ್ಯೋಗಿ ನಿಧಿ,ಶ್ರೀ ದುರ್ಗಾ ಕ್ಲಿನಿಕ್ ನ ಡಾ.ಹರ್ಷಿತಾ ಸುವಿನ್, ಶಿಶಿಲ ಗ್ರಾ.ಪಂ.ಅಧ್ಯಕ್ಷ ಸುಧೀನ್, ಶಿಬಾಜೆ ಗ್ರಾ.ಪಂ.ಸದಸ್ಯೆ ವನಿತಾ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ. ಸಾಲ್ಯಾನ್, ನಿರ್ದೇಶಕ ಮುರುಳೀಧರ್ ಶೆಟ್ಟಿಗಾರ್, ಅರಸಿನಮಕ್ಕಿ ಗ್ರಾ.ಪಂ. ಸದಸ್ಯ ಪ್ರೇಮಚಂದ್ರ ಉಪಸ್ಥಿತರಿದರು.

ಗಣೇಶ್ ಕೆ ಹೊಸ್ತೋಟ ಇವರ ಶ್ರೀನಿಧಿ ಜನಸೇವಾ ಕೇಂದ್ರದಲ್ಲಿ ಗ್ರಾಮ ಒನ್ ಸೌಲಭ್ಯದ ಜೊತೆಗೆ ಬ್ಯಾಂಕ್ ಆಫ್ ಬರೋಡ ದ ಸೇವೆಯು ಇನ್ನು ಮುಂದೆ ಸಿಗಲಿದೆ. ರೆಖ್ಯ,ಶಿಬಾಜೆ,ಅರಸಿನಮಕ್ಕಿಶಿಬರಾಜೆ ಜನರಿಗೆ ಶಿಶಿಲದ ವರೆಗೆ ಪ್ರಯಾಣಿಸುವ ಸಮಯ ಮತ್ತು ಹಣವೂ ಉಳಿತಾಯವಾಗಲಿದೆ.ಬಂದಂತಹ ಅತಿಥಿ ಮಹೋದಯರನ್ನು ಶ್ರೀನಿಧಿ ಜನಸೇವಾ ಕೇಂದ್ರದ ಗಣೇಶ್ ಕೆ ಹೊಸ್ತೋಟ, ಹಾಗೂ ಧನ್ಯರವರು ಸತ್ಕರಿಸಿದರು.

LEAVE A REPLY

Please enter your comment!
Please enter your name here