ಶಿಬಾಜೆ ದೇವಸ್ಥಾನದಲ್ಲಿ ನವರಾತ್ರಿ-ಚೌತಿ ಹಾಗೂ ಇನ್ನಿತರ ಕಾಮಗಾರಿಗಳ ಬಗ್ಗೆ ಪೂರ್ವಭಾವಿ ಸಭೆ

0

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುವ ಕುರಿತು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಇತರ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಪೂರ್ವಭಾವಿ ಸಭೆ ನಡೆಸಿದರು.

ಈ ಸಭೆಯಲ್ಲಿ ನವರಾತ್ರಿ ಆಚರಣೆ ಹೊರತಾಗಿ ದೇವಸ್ಥಾನದ ಖರ್ಚು ವೆಚ್ಚಗಳ ಬಗ್ಗೆ ಚೌತಿಯ ವ್ಯವಸ್ಥೆಯ ಬಗ್ಗೆ ನೂತನವಾಗಿ ನಿರ್ಮಿಸಲ್ಪಡುವ ಸಮುದಾಯ ಭವನದ ಕಾಮಗಾರಿಯ ಬಗ್ಗೆ ಹಾಗೂ ದೇವಳದ ಜಮೀನಿನ ಕೃಷಿ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್, ಕೃಷ್ಣಪ್ಪಗೌಡ ಬೆಂಗಳ, ಈಶ್ವರ ಶೆಟ್ಟಿಗಾರ್ ಬರಮೇಲು, ನಾರಾಯಣಗೌಡ ಪಡಂತಾಜೆ, ಸತೀಶ್ ಎಂ ಕೆ ಪತ್ತಿಮಾರು, ಶಾರದಾ ಪ್ರಕಾಶ್ ರಾವ್ ಅಜಿರಡ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿವಾಕರ ಹೆಬ್ಬಾರ್, ಉಪಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ವಾಗತವನ್ನು ದೇವಳದ ಸಿಬ್ಬಂದಿಯಾದ ಶಕುಂತಲಾ ಮತ್ತು ಧನ್ಯವಾದ ಕೃಷ್ಣಪ್ಪ ಗೌಡ ಬೆಂಗಳ ನೆರವೇರಿಸಿದರು

LEAVE A REPLY

Please enter your comment!
Please enter your name here