ಚಂದ್ರಯಾನ ಯಶಸ್ಸು ರಾಷ್ಟ್ರದ ಇತಿಹಾಸದಲ್ಲಿ ಹೊಸ ಪುಟ ತೆರೆದಿದೆ: ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ಚಂದ್ರಯಾನ-3 ತನ್ನ ಗುರಿಯನ್ನು ತಲುಪಿ ಯಶಸ್ವಿಯಾಗಿದ್ದು, ರಾಷ್ಟ್ರದ ಇತಿಹಾಸದಲ್ಲಿ ಹೊಸ ಪುಟಗಳನ್ನು ತೆರೆದಿದೆ.ಇದನ್ನು ಸಾಧಿಸಿದ ಇಸ್ರೋ ವಿಜ್ಞಾನಿಗಳಿಗೆ ಹಾಗೂ ಇದರ ಹಿಂದಿರುವ ಪ್ರೇರಕ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.

ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಚಂದ್ರನ ಮೇಲೆ ಭಾರತ ಸಾಧಿಸಿರುವ ವಿಕ್ರಮ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನವ ಮನ್ವಂತರಕ್ಕೆ ದಾರಿಯಾಗಲಿದೆ. ನಮ್ಮೆಲ್ಲರ ಕಾತರದ ಕ್ಷಣಗಳಿಗೆ ಆನಂದದ ಸ್ಪರ್ಶವಾಗಿದೆ. ಇಂದು ನಾವು ಮಾತ್ರವಲ್ಲದೆ ಸಂಪೂರ್ಣ ವಿಶ್ವವೇ ಆನಂದಪಟ್ಟಿದೆ. ಈಗಾಗಲೇ ವಿಶ್ವದಲ್ಲಿ ಭಾರತ ಅಗ್ರಗಣ್ಯ ಸ್ಥಾನಕ್ಕೆ ಹೋಗುತ್ತಿದ್ದು ಅದಕ್ಕೆ ಇಂದಿನ ಸಾಧನೆಯು ಮತ್ತಷ್ಟು ಪುಷ್ಟಿಯನ್ನು ನೀಡಲಿದೆ ಎಂದು ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here