ಗೇರುಕಟ್ಟೆ: ಒಕ್ಕೂಟ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಸಂಘಕ್ಕೆ ಭೇಟಿ

0

ಗೇರುಕಟ್ಟೆ: ಒಕ್ಕೂಟದ ನಿರ್ದೇಶಕ ಹಾಗೂ ಕ.ಹಾ.ಮ.ದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಹಾಗೂ ಬಿ.ಎಮ್.ಸಿ.ಗೆ ಭೇಟಿ ನೀಡಿದ್ದರು.ಸಂಘದ ವತಿಯಿಂದ ಅಧ್ಯಕ್ಷ ಜನಾರ್ಧನ ಗೌಡ ಕೆ.ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಸುಮಾರು 750 ಕಟ್ಟಡಗಳಲ್ಲಿರುವ ಈ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉತ್ತಮ ಗುಣಮಟ್ಟದ ನಿರ್ಮಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದ.ಕ.ಒಕ್ಕೂಟದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ವಿಸ್ತಾರಣಾಧಿಕಾರಿ ರಾಜೇಶ್ ಕಾಮಾತ್ ಪಿ., ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಸಿರಿಲ್ ಪಿಂಟೊ, ನಿರ್ದೇಶಕರು ಗಳಾದ ಕುಶಾಲವತಿ, ಯೋಗಿನಿ, ಕೇಶವ ಪೂಜಾರಿ ಕೆ.,ನೇವಿಲ್ ಸ್ಟೀವನ್ ಮೊರಾಸ್., ಪ್ರವೀಣ್ ಪೂಜಾರಿ., ರಂಜನ್ ಹೆಚ್., ಗಿರಿಯಪ್ಪ ಗೌಡ ಕೆ.ವಸಂತ ನಾಯ್ಕ., ಗಂಗಯ್ಯ ಗೌಡ., ಮೋಹನ್ ದಾಸ್ ಶೆಟ್ಟಿ ಹಾಗೂ ರೇಖಾ ರುಕ್ಮಯ್ಯ ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಣಾಧಿಕಾರಿ ಗುಲಾಬಿ ಹಾಗೂ ಸಿಬ್ಬಂದಿಗಳು ಭಾಗವಹಿಸಿ, ಸಹಕರಿಸಿದರು.

LEAVE A REPLY

Please enter your comment!
Please enter your name here