ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ನಾವರದ ನಿರೀಕ್ಷಾ.ಎನ್ ಗೆ ಅಭಿನಂದನೆ

0

ಬೆಳ್ತಂಗಡಿ: ಭಾರತೀಯ ಲೆಕ್ಕ ಪರಿಶೋಧಕರ ಸಂಘ (Institute of Chartered Accountant of India)(ICAI)ದ SIRC ಮಂಗಳೂರು ಶಾಖೆ ಮತ್ತು ICAI ಯ SICASA ವತಿಯಿಂದ ICAI ಭವನ ಪಡೀಲ್‌ ಇಲ್ಲಿ ಸಿ.ಎ.ಅಂತಿಮ ಪರೀಕ್ಷೆ ಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು.

ಇದರಲ್ಲಿ ಮಂಗಳೂರಿನ ಟಾಪರ್ ಆಗಿ ಎರಡು ವಿದ್ಯಾರ್ಥಿಗಳು ಮೂಡಿಬಂದಿದ್ದು ಅದರಲ್ಲಿ ಓರ್ವಳಾದ ಕುಮಾರಿ ಸಿ.ಎ ನಿರೀಕ್ಷಾ ಎನ್ ನಾವರ ಇವರನ್ನು ಸಂಸ್ಥೆ ಯಿಂದ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿ ಯಾಗಿ ಡಾ.ಎಡ್ಮಂಡ್ ಫೆರ್ನಾಂಡಿಸ್ ಸಾರ್ಥಕ ಜೀವನಕ್ಕಾಗಿ ಮಾನಸಿಕ ಸ್ವಾಸ್ಥ್ಯಕ್ಕೆ ಹೇಗೆ ಆದ್ಯತೆ ನೀಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ICAI ಯ SIRC ನ ಮಂಗಳೂರು ಶಾಖೆಯ ಸಿ.ಎ.ಮಮತಾ ರಾವ್ ಸಿ ಎ ಗೌತಮ್ ಪೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here