ಮುಂಡಾಜೆ: ಜಿಂಕೆ ದಾಳಿಗೆ ಆಡುಗಳು ಬಲಿ

0

ಬೆಳ್ತಂಗಡಿ: ಜಿಂಕೆಗಳ ದಾಳಿಗೆ ಆಡುಗಳು ಬಲಿಯಾದ ಘಟನೆ ಮುಂಡಾಜೆಯ ಪರಮುಖದಲ್ಲಿ ನಡೆದಿದೆ.ಇಲ್ಲಿನ ಪ್ರಶಾಂತ ಪೂಜಾರಿಯವರು ತಮ್ಮ ಗದ್ದೆಯಲ್ಲಿ ಮೇಯಲು ಆಡುಗಳನ್ನು ಬಿಟ್ಟಿದ್ದ ಸಂದರ್ಭ ಜಿಂಕೆಗಳ ಗುಂಪು ದಾಳಿ ನಡೆಸಿ ಆಡುಗಳಿಗೆ ಹಾಯ್ದ ಪರಿಣಾಮ ಎರಡು ಆಡುಗಳು ಸತ್ತು ಬಿದ್ದಿವೆ.ಸುಮಾರು 15 ಸಾವಿರ ರೂ.ಮೌಲ್ಯ ನಷ್ಟ ಸಂಭವಿಸಿದೆ.

ಈ ಪ್ರದೇಶದಲ್ಲಿ ಜಿಂಕೆಗಳ ಸಂಚಾರ ಹೆಚ್ಚಿವೆ. ರಾತ್ರಿ ಸಮಯ ಹೆದ್ದಾರಿಯಲ್ಲೂ ಹಾದು ಹೋಗುವುದರಿಂದ ದ್ವಿಚಕ್ರ ಸವಾರರು ವಾಹನ ಸವಾರರಿಗೂ ಅಪಾಯಕಾರಿಯಾಗಿವೆ.

LEAVE A REPLY

Please enter your comment!
Please enter your name here