ಮುಂಡಾಜೆ: ಧರೆಗುರುಳಿದ ಭಾರಿ ಗಾತ್ರದ ಮರ- ರಾ.ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ- ಶೌರ್ಯ ತಂಡ ಹಾಗೂ ಸ್ಥಳೀಯರಿಂದ ತೆರವು

0

ಮುಂಡಾಜೆ: ಜು.28ರಂದು ನಸುಕಿನ ಜಾವ 4.30ಕ್ಕೆ ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಬಳಿ ಭಾರಿ ಗಾತ್ರದ ಮರ ರಾಷ್ಟ್ರೀಯ ಹೆದ್ದಾರಿಗೆ ಬಿದ್ದು ವಾಹನ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು.‌

ಇದರಿಂದಾಗಿ ಸ್ಥಳೀಯರು ಕೂಡಲೇ ಶೌರ್ಯ ಸ್ವಯಂ ಸೇವಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ ಕಾರಣ ಜಗದೀಶ ನಾಯ್ಕ ಹಾಗೂ ಸಚಿನ್ ಭಿಡೆ ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳೀಯರನ್ನು, ಅರಣ್ಯ, ಮೆಸ್ಕಾಂ ಇಲಾಖೆಗಳಿಗೆ ಸಂಪರ್ಕಿಸಿ ಕೂಡಲೇ ಮರವನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರಾದ ಶೇಖರ್, ಭರತ್, ಅಬ್ಬುಕರ್, ರಶೀದ್, ಕೇಶವ ಗೊಲ್ಲ, ಅಶೋಕ್ ಮೆಹೇoದಲೆ, ಅಣ್ಣಯ್ಯ, ರಾಘವ, ಸಚಿನ್ ಭಿಡೆ ಪಂಚಾಯತ್ ಸದಸ್ಯ ಜಗದೀಶ್ ನಾಯ್ಕ, ಗಣೇಶ್ ಬಂಗೇರ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸಂತೋಷ್, ಸದಾನಂದ, ಲತೀಫ್ ಸಹಕರಿಸಿದರು.

LEAVE A REPLY

Please enter your comment!
Please enter your name here