ಯುವ ಉದ್ಯಮಿ ಕಿರಣ್ ಕುಮಾರ್ ಮಂಜಿಲರವರಿಂದ ಆರಂಬೋಡಿ ಗ್ರಾಮದ ಬಡ ಕುಟುಂಬಕ್ಕೆ ಸುಮಾರು ರೂ.70 ಸಾವಿರ ವೆಚ್ಚದ ಶೌಚಾಲಯ ನಿರ್ಮಿಸಿ ಹಸ್ತಾಂತರ

0

ಆರಂಬೋಡಿ: ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಾಂದೊಟ್ಯ ನಿವಾಸಿಯಾದ ಸುಜಾತಾ ಪೂಜಾರಿ ಅವರಿಗೆ ರೋಟರಿ ಕ್ಲಬ್ ಲೋರೆಟ್ಟೋ ಹೀಲ್ಸ್ ನ ಸಕ್ರಿಯ ಪದಾಧಿಕಾರಿಯಾದ ರೋ.ಕಿರಣ್ ಕುಮಾರ್ ಮಂಜಿಲ ಇವರು ಶೌಚಾಲಯ ಹಾಗೂ ಸ್ನಾನದ ಕೊಠಡಿ ನಿರ್ಮಿಸಿ ಕೊಟ್ಟಿರುತ್ತಾರೆ.ಇದಕ್ಕೆ ಸ್ವತಃ ಕಿರಣ್ ಮಂಜಿಲ ರವರೆ ಅಂದಾಜು ರೂಪಾಯಿ 70,000 ಸಾವಿರವನ್ನು ಖರ್ಚು ಮಾಡಿರುತ್ತಾರೆ.ಶ್ರೀಯುತರು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಸಮಾಜ ಸೇವೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿರುತ್ತಾರೆ,ಕಿರಣ್ ಕುಮಾರ್ ಮಂಜಿಲ ರವರ ಹುಟ್ಟುಹಬ್ಬದ ದಿನದಂದು ಶೌಚಾಲಯವನ್ನು
ಭಾರತೀಯ ಜನತಾ ಪಕ್ಷದ ತಾಲೂಕಿನ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ರವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಲೋರೆಟ್ಟೋ ಹೀಲ್ಸ್ ನ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿಯಾದ ಐವನ್ ಮೇನೆಜಸ್, ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ, ಶರಾಲ್ಡ್ ಕ್ರಾಸ್ತಾ, ರೋಡಲ್ಫ್ ಮಾಸ್ಟರ್, ವೇಣೂರು ಗ್ರಾ.ಪಂ.ಮಾಜಿ ಸದಸ್ಯ ರಾಜೇಶ್ ಮೂಡುಕೋಡಿ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಶೆಟ್ಟಿ ಅಜ್ಜಾಡಿ, ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಉಮನೊಟ್ಟು ಹಾಗೂ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿಗಾರ್, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಆಶಾ ಎಸ್ ಶೆಟ್ಟಿ, ಉಮೇಶ್ ಶೆಟ್ಟಿ ಪಾಳ್ಯ, ಸಂತೋಷ್ ಮಂಜಿಲ,ರಾಜೇಶ್ ಹುಲಿಮೇರು, ಸುರೇಶ್ ಮಂಜಿಲ, ನಿತೇಶ್ ಕುಂಜಾಡಿ, ಸುರೇಶ್.ಎಚ್.ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here