ಸೌಜನ್ಯ ಕೇಸ್: ಸರಿಯಾದ ತನಿಖೆ ನಡೆಸಲು ಆಡಳಿತ ವ್ಯವಸ್ಥೆ ವಿಫಲ: ಮರುತನಿಖೆಗೆ ಆಗ್ರಹಿಸಿ ಶಾಸಕರಾದ ಪೂಂಜ, ಪ್ರತಾಪ ಸಿಂಹ ನಾಯಕ್ ರಿಂದ ಸಿಎಂಗೆ ಮನವಿ

0

ಬೆಂಗಳೂರು: ಧರ್ಮಸ್ಥಳ ಮಣ್ಣಸಂಕದ ಬಳಿ ಅಕ್ಟೋಬರ್ 9 2012ರಲ್ಲಿ ನಡೆದಿರುವ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕೆಂದು ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಿದ್ದಾರೆ.

ಸಿಬಿಐ ತನಿಖೆ ನಡೆದು ಸಂತೋಷ್ ರಾವ್ ದೋಷಮುಕ್ತಿಯಾದ ನಂತರ ಸೌಜನ್ಯ ಸಾವಿಗೆ ಕಾರಣರಾದವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಅಲ್ಲದೇ ಈ ಪ್ರಕರಣದಲ್ಲಿ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂಬ ದುಗುಡ ಬೆಳ್ತಂಗಡಿ ಸಜ್ಜನ ಜನರದ್ದಾಗಿದೆ.ಆದ್ದರಿಂದ ಕೂಡಲೇ ಪ್ರಕರಣ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕಾಗಿ ಶಾಸಕರಿಬ್ಬರು ಮನವಿ ಮಾಡಿದ್ದಾರೆ

LEAVE A REPLY

Please enter your comment!
Please enter your name here