ಉಮ್ಮನ್ ಚಾಂಡಿ ನಿಧನಕ್ಕೆ ಕೆ.ಎಸ್.ಎಮ್.ಸಿ.ಎ ಸಂತಾಪ

0

ಬೆಳ್ತಂಗಡಿ: ಕೇರಳ ರಾಜ್ಯ ಕಂಡ ಅಪ್ರತಿಮ ರಾಜಕಾರಣಿ, ಸುಮಾರು ಐದು ದಶಕಗಳಿಗಿಂತಲೂ ಹೆಚ್ಚು ವರುಷಗಳು ವಿಧಾನ ಸಭಾ ಸದಸ್ಯ, ಸೋಲರಿಯದ ಸರದಾರ ದಿನದ ಇಪ್ಪತ್ತನಾಲ್ಕು ಗಂಟೆಗಳು ಜನರ ಮದ್ಯೆ ಇದ್ದು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಜನಸಾಮಾನ್ಯರ ಸಮೀಪಕ್ಕೆ ತಂದ ದೀಮಂತ ಜನನಾಯಕ ದಿ.ಉಮ್ಮನ್ ಚಾ೦ಡಿ ನಿಧನಕ್ಕೆ ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಜುಲೈ 18 ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಬಿಟ್ಟಿ ನೆಡುನಿಲಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕ ವಂದನಿಯ ಫಾ.ಶಾಜಿ ಮಾತ್ಯು ದೇಶಕ್ಕೆ ಚಾ೦ಡಿ ನೀಡಿದ ಕೊಡುಗೆಯ ಕುರಿತು ಮಾತನಾಡಿದರು.

ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ.ಜೆ ಸಂತಾಪ ಸೂಚಕ ನಿಲುವಳಿಯನ್ನು ಮಂಡಿಸಿದರು.

ಸಭೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇಬಾಸ್ಟಿನ್ ಪಿ.ಸಿ ಟ್ರಷರೆರ್, ಜಿಮ್ಮಿ ಗುಂಡ್ಯ, ಜೋರ್ಜ್ ಟಿ.ವಿ, ಅಲ್ಫೋನ್ಸ, ರೀನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here