ಇಂಡಿಯನ್ ಗ್ರಾಂಡ್ ಮುಫ್ತಿಯನ್ನು ಭೇಟಿಯಾದ ಮಚಾರ್ ಹಾಗು ಬೆಳಾಲು ಆಡಳಿತ ಸಮಿತಿ

0

ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಬೆಳಾಲು – ಮಾಚಾರ್ ಆಡಳಿತ ಸಮಿತಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ಆಶೀರ್ವಾದವನ್ನು ಪಡೆದರು.

ಈ ಸಂದರ್ಭದಲ್ಲಿ ಮಸೀದಿ ಮತ್ತು ಜಮಾಅತಿನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಸಲಹೆಗಳನ್ನು ಪಡೆಯಲಾಯಿತು.

ಕೇರಳದಿಂದ ನಡೆದುಕೊಂಡು ಮಕ್ಕಾ ಯಾತ್ರೆ ಹೊರಟ ಶಿಹಾಬ್ ಚೊಟ್ಟುರು ಈ ಸಂದರ್ಭದಲ್ಲಿ ಉಸ್ತಾದರ ಭೇಟಿಗಾಗಿ ಬಂದಿದ್ದರೂ, ಅದರ ನಡುವೆಯೂ ಕರ್ನಾಟಕದಿಂದ ಹೋದ ಈ ಸಮಿತಿಗೆ ಉಸ್ತಾದರು ಅವರ ಅತ್ಯಮೂಲ್ಯ ಸಮಯವನ್ನು ನೀಡಿ ಆಧರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಆದಂ ಟಿ.ಎಚ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ಬೆಳಾಲು, ಕೋಶಾಧಿಕಾರಿ ಹಸೈನಾರ್, ಮಾಚಾರ್ ಜಮಾಅತಿನ ಕಾರ್ಯದರ್ಶಿ ಇಕ್ಬಾಲ್ ಮಾಚಾರ್ ಹಾಗೂ ಉಪಾಧ್ಯಕ್ಷ ಸಲೀಂ ಮಾಚಾರ್ ಉಪಸ್ಥಿತರಿದ್ದರು.

ಮರ್ಕಝಿನಲ್ಲಿ ಕಲಿಯುತ್ತಿರುವ ಮುತಅಲ್ಲಿಮರಾದ ಸಾದಿಕ್ ಬೆಳಾಲು, ಮಾಚಾರಿನ ಸಾಬಿತ್ ಹಫೀಜ್, ಅಕ್ಬರ್ ಅಲಿ ಮಲೆಬೆಟ್ಟು, ಜುನೈದ್ ಪಿಲ್ಯ, ಮುದಸ್ಸಿರ್ ಸರಳಿಕಟ್ಟೆ ಸಮಿತಿಗೆ ಗ್ರಾಂಡ್ ಮುಫ್ತಿಯನ್ನು ಭೇಟಿ ಮಾಡಲು ಸಹಕರಿಸಿದರು.

LEAVE A REPLY

Please enter your comment!
Please enter your name here